ಯುಎಸ್-ಮೆಕ್ಸಿಕೋ ನಡುವೆ ‘ಬೆಣ್ಣೆ’ಗೋಡೆ: ನೋಯ್ತಿದೆ ಟ್ರಂಪ್ ದವಡೆ!

Published : Mar 30, 2019, 12:09 PM IST
ಯುಎಸ್-ಮೆಕ್ಸಿಕೋ ನಡುವೆ ‘ಬೆಣ್ಣೆ’ಗೋಡೆ: ನೋಯ್ತಿದೆ ಟ್ರಂಪ್ ದವಡೆ!

ಸಾರಾಂಶ

ಅಮೆರಿಕ-ಮೆಕ್ಸಿಕೋ ಮಧ್ಯೆ ಬೆಣ್ಣೆಗೋಡೆ ನಿರ್ಮಾಣಕ್ಕೆ ಚಾಲನೆ| ಕಲಾವಿದನ ಬೆಣ್ಣೆಗೋಡೆ ಕಂಡು ಟ್ರಂಪ್ ಬಾಯಲ್ಲೂ ನೀರು| ಗಡಿಯಲ್ಲಿ ಬೆಣ್ಣೆಗೋಡೆ ನಿರ್ಮಿಸುತ್ತಿರುಯವ ಕೆನಡಾ ಕಲಾವಿದ ಕೋಸಿಮೊ ಕವಲಾರೋ| ಟ್ರಂಪ್ ಸಹಾಯ ಬೇಡಿದ ಕಲಾವಿದ ಕೋಸಿಮೊ ಕವಲಾರೋ| ವಾಯ್ದೆ ಮುಗಿದಿರುವ ಬೆಣ್ಣೆ ಪ್ಯಾಕೆಟ್‌ನಲ್ಲಿ ಮಾನವೀಯತೆ ಸಂದೇಶ|

ವಾಷಿಂಗ್ಟನ್(ಮಾ.30): ಅಮೆರಿಕ-ಮೆಕ್ಸಿಕೋ ನಡುವೆ ಬೃಹತ್ ಗೋಡೆ ನಿರ್ಮಿಸುವುದಾಗಿ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದವಡೆಗಳು ಅದೇಕೊ ನೋಯಿಸತೊಡಗಿವೆ. 

ತಾವು ಕಟ್ಟಬೇಕೆಂದಿದ್ದ ಕಾಂಕ್ರೀಟ್ ಗೋಡೆಯ ಜಾಗದಲ್ಲೇ ಕಲಾವಿದನೋರ್ವ ಬೆಣ್ಣೆಯ ಗೋಡೆ ಕಟ್ಟುತ್ತಿರುವುದೇ ಟ್ರಂಪ್ ದವಡೆ ನೋವಿಗೆ ಕಾರಣ. ಇದು ಬೆಣ್ಣೆಯ ಆಸೆಗಾಗೋ ಅಥವಾ ಕಲಾವಿದನೋರ್ವನ ವ್ಯಂಗ್ಯಕ್ಕೆ ಬಲಿಯಾಗಿದ್ದಕ್ಕೋ ಎಂಬುದು ಕಾಲವೇ ನಿರ್ಧರಿಸಲಿದೆ.

ಕ್ಯಾಲಿಫೋರ್ನಿಯಾ ಬಳಿಯ ಟೆಕೆಟೆ ಯುಎಸ್-ಮೆಕ್ಸಿಕೋ ಗಡಿಯಲ್ಲಿ ಕೆನಡಾದ ಕಲಾವಿದ ಕೋಸಿಮೊ ಕವಲಾರೋ, ವಾಯ್ದೆ ಮುಗಿದಿರುವ ಬೆಣ್ಣೆ ಪ್ಯಾಕೆಟ್‌ಗಳ ಗೋಡೆ ನಿರ್ಮಿಸುತ್ತಿದ್ದಾರೆ. ಮೆಕ್ಸಿಕೋದಲ್ಲಿ ಬಳಕೆಯಾಗದೆ ಅವಧಿ ಮುಗಿದಿರುವ ಬೆಣ್ಣೆಗಳ ಪ್ಯಾಕೆಟ್‌ಗಳನ್ನು ಇಟ್ಟಿಗೆಯಂತೆ ಒಂದರ ಮೇಲೊಂದರಂತೆ ಜೋಡಿಸಿ ಸುಮಾರು 5 ಅಡಿ ಎತ್ತರದ ಗೋಡೆ ನಿರ್ಮಿಸಿದ್ದಾರೆ.

ಇದೇ ವೇಳೆ ಬೆಣ್ಣೆಯ ಗೋಡೆ ನಿರ್ಮಾಣಕ್ಕೆ ಟ್ರಂಪ್ ಸಹಾಯ ಬೇಡಿರುವ ಕವಲಾರೋ, ಆರ್ಥಿಕ ಸಹಾಯದ ಮೂಲಕ ಮತ್ತಷ್ಟು ಬೆಣ್ಣೆ ಖರಿದೀಸಲು ಸಹಾಯ ಮಾಡಲಿ ಅಥವಾ ಅವರೇ ಬೆಣ್ಣೆ ಇಟ್ಟಿಗೆಗಳನ್ನು ಕಳಿಸಿಕೊಡಲಿ ಎಂದು ಮಾರ್ಮಿಕವಾಗಿ ಮನವಿ ಮಾಡಿದ್ದಾರೆ.

ಕಾಂಕ್ರೀಟ್ ಗೋಡೆಗಳನ್ನು ಕಟ್ಟುವ ಮೂಲಕ ಬಿಲಿಯನ್ ಡಾಲರ್‌ಗಟ್ಟಲೇ ಹಣ ಖರ್ಚು ಮಾಡುವ ಬದಲು ಗೋಡೆ ನಿರ್ಮಾಣದ ಮೂಲಕ ಜನರನ್ನು ದೂರ ಮಾಡುವ ಬದಲು, ಬೆಣ್ಣೆ ಗೋಡೆ ಕಟ್ಟುವ ಮೂಲಕ ಜನರನ್ನು ಹತ್ತಿರ ತರುವ ಕಾರ್ಯಕ್ಕೆ ಟ್ರಂಪ್ ಬೆಂಬಲಿಸಲಿದ್ದಾರೆ ಎಂಬ ಭರವಸೆ ಇದೆ ಅಂತಾರೆ ಕವಲಾರೋ.

#GoFundMe ಎಂಬ ಅಭಿಯಾನ ಆರಂಭಿಸಿರುವ ಕವಲಾರೋ, ಅಮೆರಿಕ-ಮೆಕ್ಸಿಕೋ ನಡುವೆ ಸುಮಾರು 300 ಮೀ. ಉದ್ದದ 5 ಅಡಿ ಎತ್ತರದ ಬೆಣ್ಣೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಮಾನವೀಯತೆ ಮನುಕುಲದ ಉಳಿವಿಗಿರುವ ಏಕೈಕ ಸಾಧನ ಎಂಬುದನ್ನು ಸಾರುವುದು ತಮ್ಮ ಕಾರ್ಯದ ಹಿಂದಿನ ಉದ್ದೇಶ ಎಂದು ಕವಲಾರೋ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು