ಎಸ್‌/ಎಸ್‌ಟಿ ನೌಕರರ ಮಕ್ಕಳಿಗೂ ಕ್ರೀಮಿ ಲೇಯರ್ ಅನ್ವಯವಾಗುತ್ತಾ..?

Published : Aug 24, 2018, 09:27 AM ISTUpdated : Sep 09, 2018, 10:15 PM IST
ಎಸ್‌/ಎಸ್‌ಟಿ ನೌಕರರ ಮಕ್ಕಳಿಗೂ ಕ್ರೀಮಿ ಲೇಯರ್ ಅನ್ವಯವಾಗುತ್ತಾ..?

ಸಾರಾಂಶ

ಇತರೆ ಹಿಂದುಳಿದ ವರ್ಗದಲ್ಲಿನ ಕೆನೆಪದರದವರಿಗೆ ಈಗಾಗಲೇ ಉದ್ಯೋಗ ಬಡ್ತಿಯಲ್ಲಿ ಮೀಸಲು ನಿರಾಕರಿಸಲಾಗಿದೆ. ಹೀಗಿರುವಾಗ ಈ ನಿಯಮವನ್ನು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಕೆನೆಪದರಕ್ಕೆ ಏಕೆ ವಿಸ್ತರಿಸಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. 

ನವದೆಹಲಿ: ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇರುವ ಪರಿಶಿಷ್ಟಜಾತಿ ಮತ್ತು ಪಂಗಡಗದ ಅಧಿಕಾರಿಗಳ ಮಕ್ಕಳು ಮತ್ತು ಸಂಬಂಧಿಕರಿಗೆ ಉದ್ಯೋಗ ಬಡ್ತಿಯಲ್ಲಿ ಮೀಸಲು ನೀಡುವ ಕ್ರಮವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. 

ಇತರೆ ಹಿಂದುಳಿದ ವರ್ಗದಲ್ಲಿನ ಕೆನೆಪದರದವರಿಗೆ ಈಗಾಗಲೇ ಉದ್ಯೋಗ ಬಡ್ತಿಯಲ್ಲಿ ಮೀಸಲು ನಿರಾಕರಿಸಲಾಗಿದೆ. ಹೀಗಿರುವಾಗ ಈ ನಿಯಮವನ್ನು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಕೆನೆಪದರಕ್ಕೆ ಏಕೆ ವಿಸ್ತರಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಒಳಗೊಂಡ ಸಂವಿಧಾನ ಪೀಠ ಪ್ರಶ್ನಿಸಿದೆ. 

ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಉದ್ಯೋಗ ಬಡ್ತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಪೀಠ ಈ ಪ್ರಶ್ನೆ ಎತ್ತಿದೆ. ಆದರೆ ಸುಪ್ರೀಂನ ಈ ವಾದ ತಳ್ಳಿಹಾಕಿದ ಕೇಂದ್ರ ಸರ್ಕಾರದ ಪರ ವಕೀಲರ ತಂಡ, ಕೆನೆಪದರದವರಿಗೂ ಬಡ್ತಿ ಮೀಸಲು ನೀಡುವುದನ್ನು ಬಲವಾಗಿ ಸಮರ್ಥಿಸಿಕೊಂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?