ಕೇರಳದಲ್ಲಿ ಶ್ವಾನ ಸಂಹಾರ ಅಭಿಯಾನ !

By Internet DeskFirst Published Sep 27, 2016, 4:05 PM IST
Highlights

ತಿರುವನಂತಪುರಂ (ಸೆ.27):  ಕೇರಳದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರವಾಗಿದೆ. ನಾಯಿ ಕಡಿತದ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿವೆ.

ಬೀದಿ ನಾಯಿಗಳ ಉಪಟಳಕ್ಕೆ ನಿಯಂತ್ರಣ ಹಾಕುವಂತೆ ಕೇರಳ ಕಾಂಗ್ರೆಸ್ ಎಂ ಯುವದಳದ ಸದಸ್ಯರು ಆಗ್ರಹಿಸಿದ್ದಾರೆ.

Latest Videos

ಐದು ಸತ್ತ ನಾಯಿಗಳ ಕಾಲುಗಳನ್ನು ಬಿದಿರಿನ ಕೋಲಿಗೆ ಬಿಗಿದು ನೇತಾಡಿಸಲಾದ ಸ್ಥಿತಿಯಲ್ಲಿ ಕೋಟ್ಟಯಂನ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. 

ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಹಾಗೂ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ಶ್ವಾನ ಸಂಹಾರ ಅಭಿಯಾನವನ್ನು ತೀವ್ರಗೊಳಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)

 

click me!