ಕಾವೇರಿ ಪ್ರಕರಣದಲ್ಲಿ ಸುಪ್ರೀಂ ನೀಡಿದ ತೀರ್ಪು ಕಾನೂನು ವಿರೋಧಿ: ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಮತ

Published : Sep 13, 2016, 02:44 PM ISTUpdated : Apr 11, 2018, 12:46 PM IST
ಕಾವೇರಿ ಪ್ರಕರಣದಲ್ಲಿ ಸುಪ್ರೀಂ ನೀಡಿದ ತೀರ್ಪು ಕಾನೂನು ವಿರೋಧಿ: ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಮತ

ಸಾರಾಂಶ

"ನಾವು ನ್ಯಾಯಾಲಯಕ್ಕೆ ಅಗೌರವ ಕೊಡುತ್ತಿಲ್ಲ. ನಮಗೆ ಕುಡಿಯೋದಕ್ಕೇ ನೀರಿಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಾಗಿಲ್ಲ. ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಕೋರ್ಟ್'ಗೆ ಮನವರಿಕೆ ನಾವು ಮಾಡಿಕೊಡಬೇಕು"

ಬೆಂಗಳೂರು(ಸೆ. 13): ನೀರು ಬಿಡುವ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಕರ್ನಾಟಕ ಮಾಡಿಕೊಂಡ ಮನವಿಗೆ ಪ್ರತಿಯಾಗಿ ಸುಪ್ರೀಂಕೋರ್ಟ್'ನವರು ನೀರಿನ ಪ್ರಮಾಣವನ್ನು ಹೆಚ್ಚಿಸಿ ನೀಡಿದ ತೀರ್ಪನ್ನು ಹಿರಿಯ ಅಡ್ವೊಕೇಟ್ ಬಿ.ವಿ.ಆಚಾರ್ಯ ವಿರೋಧಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಚಾರ್ಯ, ಸುಪ್ರೀಂ ಕೋರ್ಟ್'ನ ಈ ತೀರ್ಪು ಕಾನೂನು ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ತಮಿಳುನಾಡಿನವರು ಪ್ರತಿಯೊಂದಕ್ಕೂ ಸುಪ್ರೀಂಕೋರ್ಟ್'ಗೆ ಹೋಗಿಬಿಡುತ್ತಾರೆ. ನ್ಯಾಯಾಲಯದವರು ಇಂಥದ್ದಕ್ಕೆ ಎಂಟರ್ಟೇನ್ ಮಾಡಬಾರದಿತ್ತು... ನಾವು ಮೇಲ್ಮನವಿ ಹಾಕಿದ್ದು ತಪ್ಪಿರಬಹುದು. ಆದರೆ, ಸುಪ್ರೀಂಕೋರ್ಟ್'ನವರು ನಮ್ಮ ಆ ಅರ್ಜಿಯನ್ನು ತಿರಸ್ಕರಿಸಬಹುದಿತ್ತು. ಆದರೆ, ಹೆಚ್ಚು ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದ್ದು ಸರಿಯಾದ ಜುಡಿಷಿಯಲ್ ಅಪ್ರೋಚ್ ಅಲ್ಲ" ಎಂದು ಬಿವಿ ಆಚಾರ್ಯ ಹೇಳಿದ್ದಾರೆ.

ಕೋರ್ಟ್ ಆದೇಶ ಧಿಕ್ಕರಿಸಿದರೆ ಏನಾಗುತ್ತದೆ?
"ಕಂಟೆಂಪ್ಟ್ ಆಫ್ ಕೋರ್ಟ್ ಆರೋಪ ದಾಖಲಾಗಬಹುದು. ಅದನ್ನು ಎದುರಿಸೋಕೆ ಸಿದ್ಧರಾಗಿರಬೇಕು. ನಾವು ನ್ಯಾಯಾಲಯಕ್ಕೆ ಅಗೌರವ ಕೊಡುತ್ತಿಲ್ಲ. ನಮಗೆ ಕುಡಿಯೋದಕ್ಕೇ ನೀರಿಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಾಗಿಲ್ಲ. ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಕೋರ್ಟ್'ಗೆ ಮನವರಿಕೆ ನಾವು ಮಾಡಿಕೊಡಬೇಕು" ಎಂದು ಆಚಾರ್ಯರವರು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು