ಆತಿಥ್ಯ ಕೊಟ್ಟ ದಲಿತರಿಗೆ ಶೀಘ್ರವೇ ಬಿಎಸ್‌ವೈ ಮನೆಯಲ್ಲಿ ಅತಿಥಿ ಸತ್ಕಾರ

By Suvarna Web DeskFirst Published Jul 4, 2017, 10:27 PM IST
Highlights

ರಾಜ್ಯಾದ್ಯಂತ ಜನಸಂಪರ್ಕ ಅಭಿಯಾನ ಕೈಗೊಂಡ ವೇಳೆ ಆತ್ಮೀಯವಾಗಿ ತಮ್ಮನ್ನು ಸೇರಿದಂತೆ ಬಿಜೆಪಿ ನಾಯಕರಿಗೆ ಆತಿಥ್ಯ ಕಲ್ಪಿಸಿದ 66 ದಲಿತ ಕುಟುಂಬಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆಹ್ವಾನಿಸಿ ತಮ್ಮ ಮನೆಯಲ್ಲಿ ಸತ್ಕರಿಸಲಿದ್ದಾರೆ. ಆದರೆ, ಈ ಬಗ್ಗೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ನಿಗದಿಗೊಳಿಸಲಾಗುತ್ತದೆ.

ಬೆಂಗಳೂರು (ಜು.04): ರಾಜ್ಯಾದ್ಯಂತ ಜನಸಂಪರ್ಕ ಅಭಿಯಾನ ಕೈಗೊಂಡ ವೇಳೆ ಆತ್ಮೀಯವಾಗಿ ತಮ್ಮನ್ನು ಸೇರಿದಂತೆ ಬಿಜೆಪಿ ನಾಯಕರಿಗೆ ಆತಿಥ್ಯ ಕಲ್ಪಿಸಿದ 66 ದಲಿತ ಕುಟುಂಬಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆಹ್ವಾನಿಸಿ ತಮ್ಮ ಮನೆಯಲ್ಲಿ ಸತ್ಕರಿಸಲಿದ್ದಾರೆ. ಆದರೆ, ಈ ಬಗ್ಗೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ನಿಗದಿಗೊಳಿಸಲಾಗುತ್ತದೆ.
 
ಈ ಮೂಲಕ ದಲಿತರೆಡೆಗಿನ ತಮ್ಮ ಬದ್ಧತೆ, ವಿಶ್ವಾಸಗಳನ್ನು ಮತ್ತಷ್ಟು ವಿಸ್ತರಿಸಿ ಗಟ್ಟಿಗೊಳಿಸಲಿದ್ದಾರೆ. ಅಲ್ಲದೇ, ದಲಿತರ ಮನೆಗಳಲ್ಲಿನ ಉಪಹಾರ ಸೇವನೆಯನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಜನಸಂಪರ್ಕ ಅಭಿಯಾನ ಸಂದರ್ಭದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿ ಯಶಸ್ವಿಯಾಗಿತ್ತು. ಈ ಅಭಿಯಾನದ ವೇಳೆ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಶೋಷಿತರ, ದಲಿತರ ಮತ್ತು ಹಿಂದುಳಿದವರ ಮನೆಗಳಲ್ಲಿ ಉಪಾಹಾರ ಮತ್ತು ಭೋಜನಗಳನ್ನು ಮಾಡಿದ್ದರು. ಅತ್ಯಂತ ಆತ್ಮೀಯವಾಗಿ ಸತ್ಕರಿಸಿದ ಆ ಎಲ್ಲಾ ಕುಟುಂಬಗಳ ಸದಸ್ಯರನ್ನು ಬೆಂಗಳೂರಿನ ತಮ್ಮ ಮನೆಗೆ ಆಮಂತ್ರಿಸುವ ಯಡಿಯೂರಪ್ಪ ಅವರು ಅವರೆಲ್ಲರನ್ನು ತಮ್ಮ ಆತಿಥ್ಯದ ಮೂಲಕ ಪ್ರತಿಸತ್ಕರಿಸಲಿದ್ದಾರೆ. 
 
ಮೇ 18 ರಿಂದ ಜೂ.29 ರವರೆಗೆ 27 ಜಿಲ್ಲೆಗಳ 87 ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರವಾಸ ಕೈಗೊಂಡು 10.600 ಕಿ.ಮೀ.ದೂರ ಕ್ರಮಿಸಿದ್ದಾರೆ. ಈ ಸಂದರ್ಭದಲ್ಲಿ 66 ದಲಿತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಅಲ್ಲಿ ಉಪಹಾರ, ಭೋಜನ ಸೇವಿಸಿದ್ದಾರೆ. ಜನಸಂಪರ್ಕದಲ್ಲಿ ಜಿಲ್ಲಾ ಕೇಂದ್ರಗಳನ್ನು ಬಿಟ್ಟು ತಾಲೂಕು ಕೇಂದ್ರಗಳಲ್ಲಿ 32 ಬೃಹತ್ ಸಾರ್ವಜನಿಕ ಸಭೆಗಳು, 33 ಕ್ಕೂ ಹೆಚ್ಚು ಪಕ್ಷದ ಸಭೆಗಳನ್ನು ನಡೆಸಿದ್ದರು.

 

click me!