ಸಿಎಂ ವಿರುದ್ಧ ಬಿಎಸ್ ವೈ ಮತ್ತೊಂದು ಬಾಂಬ್

Published : Feb 28, 2017, 03:41 PM ISTUpdated : Apr 11, 2018, 01:03 PM IST
ಸಿಎಂ ವಿರುದ್ಧ ಬಿಎಸ್ ವೈ ಮತ್ತೊಂದು ಬಾಂಬ್

ಸಾರಾಂಶ

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಮಾಜಿ ಶಾಸಕ ದಿನಕರಶೆಟ್ಟಿ ಹಾಗೂ ಪ್ರಮೋದ್​ ಹೆಗ್ಡೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಯಡಿಯೂರಪ್ಪ, ಗೋವಿಂದರಾಜು ಡೈರಿಯಿಂದ ಬಹಳ ಸಹಾಯವಾಗಿದೆ, ಅವರು ಹಣ ಹೇಗೆ ಸಾಗಿಸುತ್ತಿದ್ದರು, ಯಾವಾಗ ಹಣ ಸಾಗಿಸಿದರು, ಎಷ್ಟೆಷ್ಟು ಹಣ ಸಾಗಿಸಿದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ, ಎಂದಿದ್ದಾರೆ.

ಬೆಂಗಳೂರು (ಫೆ.28): ಬಿ.ಎಸ್. ಯಡಿಯೂರಪ್ಪ ಇಂದು ಸಿಎಂ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಯೋಜಿಸಲಾಗಿರುವ ಸ್ಟೀಲ್ ಸೇತುವೆಯ ಗುತ್ತಿಗೆದಾರರು 65 ಕೋಟಿ ರೂಪಾಯಿಯನ್ನು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೇ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಮಾಜಿ ಶಾಸಕ ದಿನಕರಶೆಟ್ಟಿ ಹಾಗೂ ಪ್ರಮೋದ್​ ಹೆಗ್ಡೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಯಡಿಯೂರಪ್ಪ, ಗೋವಿಂದರಾಜು ಡೈರಿಯಿಂದ ಬಹಳ ಸಹಾಯವಾಗಿದೆ, ಅವರು ಹಣ ಹೇಗೆ ಸಾಗಿಸುತ್ತಿದ್ದರು, ಯಾವಾಗ ಹಣ ಸಾಗಿಸಿದರು, ಎಷ್ಟೆಷ್ಟು ಹಣ ಸಾಗಿಸಿದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ, ಎಂದಿದ್ದಾರೆ.

ಸ್ಟೀಲ್​ ಸೇತುವೆ ಗುತ್ತಿಗೆದಾರರು ಹಣ ಕೊಟ್ಟಿರುವುದನ್ನು ಒಪ್ಪಿಕೊಂಡಿರುವ ಮಾಹಿತಿ ಲಭ್ಯವಾಗಿದೆ,  ಅವರು ಹಣ ಕೊಟ್ಟಿರುವುದು ಬೇರ್ಯಾರಿಗೂ ಅಲ್ಲ ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೈದ್ಯಾಧಿಕಾರಿಯಿಂದ ನರ್ಸ್‌ಗೆ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!
2 ಮಕ್ಕಳಾದ ನಂತರವು ಮುಸ್ಲಿಂ ಸೊಸೆಯ ಒಪ್ಪಿಕೊಳ್ಳದ ಪೋಷಕರು: ವಿಚ್ಛೇದನ ನೀಡಲು ಮುಂದಾದ ಮಗನಿಂದ ಆಯ್ತು ಘೋರ ಅಪರಾಧ