2019ಕ್ಕೆ ಎಲ್ಲರಿಗೂ ಬಿಎಸ್'ಎನ್'ಎಲ್ ಸ್ಯಾಟಲೈಟ್‌ ಫೋನ್‌

Published : May 29, 2017, 12:47 PM ISTUpdated : Apr 11, 2018, 12:51 PM IST
2019ಕ್ಕೆ ಎಲ್ಲರಿಗೂ ಬಿಎಸ್'ಎನ್'ಎಲ್ ಸ್ಯಾಟಲೈಟ್‌ ಫೋನ್‌

ಸಾರಾಂಶ

ಎಲ್ಲರಿಗೂ ಸ್ಯಾಟಲೈಟ್‌ ಫೋನ್‌ ಸೇವೆ ನೀಡುವ ಸಲುವಾಗಿ ನಾವು ಇಂಟರ್‌ನ್ಯಾಷನಲ್‌ ಮೇರಿಟೈಮ್‌ ಆರ್ಗನೈಸೇಷನ್‌ಗೆ ಕೋರಿಕೆ ಸಲ್ಲಿಸಿದ್ದೇವೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಸಮಯ ತಗುಲಲಿದ್ದು, 18-​24 ತಿಂಗಳಿನಲ್ಲಿ ಎಲ್ಲಾ ನಾಗರಿಕರಿಗೂ ಹಂತ ಹಂತವಾಗಿ ಸ್ಯಾಟಲೈಟ್‌ ಫೋನ್‌ ಸೇವೆ ಆರಂಭಿಸಲು ಸಾಧ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಇನ್ನೆರಡು ವರ್ಷದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸ್ಯಾಟಲೈಟ್‌ (ಉಪಗ್ರಹ) ಫೋನ್‌ ಸೇವೆ ನೀಡಲು ಉದ್ದೇಶಿಸಿದೆ. ಸ್ಯಾಟಲೈಟ್‌ ಫೋನ್‌ ದೇಶದ ಯಾವುದೇ ಮೂಲೆಯಲ್ಲಿಯೂ ಕಾರ್ಯನಿರ್ವಹಿಸಬಲ್ಲದು. ಅಲ್ಲದೇ ನೈಸರ್ಗಿಕ ವಿಕೋಪದಿಂದಾಗಿ ಮೊಬೈಲ್‌ ಸೇವೆಗಳು ವ್ಯತ್ಯಯಗೊಂಡರೂ ಸ್ಯಾಟಲೈಟ್‌ ಫೋನ್‌ಗಳಿಗೆ ಹಾನಿ ಇಲ್ಲ.

ಎಲ್ಲರಿಗೂ ಸ್ಯಾಟಲೈಟ್‌ ಫೋನ್‌ ಸೇವೆ ನೀಡುವ ಸಲುವಾಗಿ ನಾವು ಇಂಟರ್‌ನ್ಯಾಷನಲ್‌ ಮೇರಿಟೈಮ್‌ ಆರ್ಗನೈಸೇಷನ್‌ಗೆ ಕೋರಿಕೆ ಸಲ್ಲಿಸಿದ್ದೇವೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಸಮಯ ತಗುಲಲಿದ್ದು, 18-​24 ತಿಂಗಳಿನಲ್ಲಿ ಎಲ್ಲಾ ನಾಗರಿಕರಿಗೂ ಹಂತ ಹಂತವಾಗಿ ಸ್ಯಾಟಲೈಟ್‌ ಫೋನ್‌ ಸೇವೆ ಆರಂಭಿಸಲು ಸಾಧ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ಸ್ಯಾಟಲೈಟ್‌ ಫೋನ್‌ಗಳು ಭೂಮಿಯಿಂದ 35,700 ಅಡಿ ಎತ್ತದಲ್ಲಿರುವ ಉಪಗ್ರಹಗಳಿಂದ ನೇರವಾಗಿ ಸಂಕೇತಗಳನ್ನು ಪಡೆಯುವುದರಿಂದ ವಿಮಾನ, ಹಡಗುಗಳ ಒಳಗೂ ಕಾರ್ಯನಿರ್ವಹಿಸಲಿವೆ. ಆದರೆ, ಸಾಂಪ್ರದಾಯಿಕ ಮೊಬೈಲ್‌ ಫೋನ್‌ಗಳು ಟವರ್‌ಗಳಿಂದ 25​-30 ಕಿ.ಮೀ.ಯ ಸುತ್ತಮುತ್ತ ಮಾತ್ರ ಕಾರ್ಯನಿರ್ವಹಿಸುತ್ತವೆ.

ವೆಚ್ಚ ಕಡಿಮೆ ಆಗುವ ನಿರೀಕ್ಷೆ: ಮೊದಲ ಹಂತದಲ್ಲಿ ವಿಪತ್ತು ನಿರ್ವಹಣಾ ಸಂಸ್ಥೆಗಳು, ರಾಜ್ಯ ಪೊಲೀಸ್‌, ರೈಲ್ವೆ, ಗಡಿ ಭದ್ರತಾ ಪಡೆ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಸ್ಯಾಟಲೈಟ್‌ ಫೋನ್‌ಗಳನ್ನು ನೀಡಲಾಗುತ್ತದೆ. ಸೇವೆ ವಿಸ್ತರಿಸಿ ಹೆಚ್ಚು ಹೆಚ್ಚು ಜನರು ಸ್ಯಾಟಲೈಟ್‌ ಫೋನ್‌ ಬಳಸಲು ಆರಂಭಿಸಿದರೆ ರೂ.40,000 ಬೆಲೆಯ ಫೋನ್‌ ದರ ಕಡಿಮೆಯಾಗಲಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್