ಸುಧಾಕರ್ ಕೂಡಿಟ್ಟು ಕಾಂಗ್ರೆಸ್ ಗೂಂಡಾಗಿರಿ!

By Web DeskFirst Published Jul 11, 2019, 7:56 AM IST
Highlights

ಶಾಸಕರನ್ನು ಕೂಡಿಹಾಕಿ ಕಾಂಗ್ರೆಸ್‌ ಗೂಂಡಾಗಿರಿ: ಯಡಿಯೂರಪ್ಪ| ಕೆ.ಜೆ.ಜಾರ್ಜ್‌ ಕೊಠಡಿಯಲ್ಲಿ ಕೂಡಿ ಹಾಕಿ ಗೂಂಡಾಗಿರಿ

ಬೆಂಗಳೂರು[ಜು.11]: ಕಾಂಗ್ರೆಸ್‌ ನಾಯಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಡಾ.ಸುಧಾಕರ್‌ ಅವರನ್ನು ಸಚಿವ ಕೆ.ಜೆ.ಜಾಜ್‌ರ್‍ ಅವರ ಕೊಠಡಿಯಲ್ಲಿ ಕೂಡಿ ಹಾಕಿ ಗೂಂಡಾಗಿರಿ ಎಸಗಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಸಚಿವರು ಹಾಗೂ ಕಾಂಗ್ರೆಸ್‌ ನಾಯಕರೇ ಸುಧಾಕರ್‌ ಅವರ ಕತ್ತಿನಪಟ್ಟಿಹಿಡಿದು ಎಳೆದಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭ ಶಾಸಕರಿಗೆ ರಕ್ಷಣೆಯಿಲ್ಲ, ರಾಜೀನಾಮೆ ನೀಡಿರುವ ಶಾಸಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದೆವು. ಅದಾದ ಕೆಲವೇ ಗಂಟೆಗಳಲ್ಲಿ ಸುಧಾಕರ್‌ ಮೇಲೆ ವಿಧಾನಸೌಧದಲ್ಲೇ ದೌರ್ಜನ್ಯ ನಡೆದಿದೆ. ಮಾಧ್ಯಮಗಳಿಂದಾಗಿ ಕಾಂಗ್ರೆಸ್ಸಿನ ಗೂಂಡಾಗಿರಿ ಸಂಸ್ಕೃತಿ ಇಡೀ ದೇಶ, ಜಗತ್ತಿಗೆ ಪರಿಚಯವಾಯಿತು ಎಂದು ಹೇಳಿದರು.

click me!