ಇಡೀ ಬೆಂಗಳೂರನ್ನು ಕಾವೇರಿ ವ್ಯಾಪ್ತಿಗೆ ತನ್ನಿ : ರಾಜ್ಯದ ವಾದ

Published : Sep 15, 2017, 05:44 PM ISTUpdated : Apr 11, 2018, 01:04 PM IST
ಇಡೀ ಬೆಂಗಳೂರನ್ನು ಕಾವೇರಿ ವ್ಯಾಪ್ತಿಗೆ ತನ್ನಿ : ರಾಜ್ಯದ ವಾದ

ಸಾರಾಂಶ

ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅಂತಿಮ ವಿಚಾರಣೆಯಲ್ಲಿ ಕರ್ನಾಟಕ ಮತ್ತು ಕೇರಳ ತಮ್ಮ ಮೌಖಿಕ ವಾದ ಮಂಡನೆಯನ್ನು ಮುಕ್ತಾಯಗೊಳಿಸಿವೆ.

ನವದೆಹಲಿ: ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅಂತಿಮ ವಿಚಾರಣೆಯಲ್ಲಿ ಕರ್ನಾಟಕ ಮತ್ತು ಕೇರಳ ತಮ್ಮ ಮೌಖಿಕ ವಾದ ಮಂಡನೆಯನ್ನು ಮುಕ್ತಾಯಗೊಳಿಸಿವೆ.

ರಾಜ್ಯದ ಪರ ವಾದ ಮಂಡನೆ ಮಾಡಿದ ವಕೀಲ ಮೋಹನ್ ಕಾತರಕಿ, ಕರ್ನಾಟಕಕ್ಕೆ ಕಾವೇರಿ ನೀರಿನಲ್ಲಿ ಪ್ರಸಕ್ತ ಇರುವ ಪಾಲನ್ನು 270 ಟಿಎಂಸಿಯನ್ನು 320 ಟಿಎಂಸಿಗೆ ಏರಿಸಬೇಕು. ಪ್ರಸಕ್ತ ತಮಿಳುನಾಡಿಗೆ ಕರ್ನಾಟಕ ನೀಡಬೇಕಿರುವ 192 ಟಿಎಂಸಿಯ ಬಾಧ್ಯತೆಯನ್ನು 102 ಟಿಎಂಸಿಗೆ ಇಳಿಸಬೇಕು. ತಮಿಳುನಾಡಿನಲ್ಲಿ ಈಶಾನ್ಯ ಮಾರುತದ ಮಳೆ ಬರುವುದು ಅಕ್ಟೋಬರ್ ಬಳಿಕ  ತಮಿಳುನಾಡು ತನ್ನ ಭತ್ತದ ಕೃಷಿಯನ್ನು ಪ್ರಾರಂಭಿಸುವುದು ಬೇಸಗೆ (ಆಗಸ್ಟ್) ನಲ್ಲಿ. ಯಾಕೆ ಭತ್ತದ ಕೃಷಿಯನ್ನು ಬೇಸಗೆಯಲ್ಲಿ ಪ್ರಾರಂಭಿಸಬೇಕು? ಈಶಾನ್ಯ ಮಾರುತದ ಮಳೆ ಸುರಿದ ಮೇಲೆ ಪ್ರಾರಂಭಿಸಬಹುದಲ್ಲವೇ? ಎಂದು ವಾದಿಸಿದರು.

ಬಳಿಕ ವಾದ ಮಂಡಿಸಿದ ರಾಜ್ಯದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್, ಅಂತರ್ ನದಿ ಕೊಳ್ಳ ಯೋಜನೆಗಳಿಗೆ ಅವಕಾಶ ನೀಡಬೇಕು. ಪರಿಸರ ಬಳಕೆಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಎಲ್ಲ ರಾಜ್ಯಗಳು ತಮ್ಮ ಕೊಡುಗೆ ನೀಡಬೇಕು. ಬೆಂಗಳೂರಿಗೆ 2011ರ ಜನಗಣತಿಯ ಪ್ರಕಾರ ನೀರು ಹಂಚಿಕೆ ಮಾಡಬೇಕು. ಈಗ ನ್ಯಾಯಾಧಿಕರಣವು ಬೆಂಗಳೂರಿನ ಮೂರನೇ ಒಂದು ಭಾಗವನ್ನು ಕಾವೇರಿ ಸೀಮೆ ಎಂದು ಪರಿಗಣಿಸಿ ನೀರು ಹಂಚಿಕೆ ಮಾಡಿದ್ದು ಉಳಿದ ಮೂರನೇ ಎರಡು ಭಾಗವನ್ನು ಕಾವೇರಿ ಕೊಳ್ಳದಿಂದ ಹೊರಗಿಡಲಾಗಿದೆ. ಇಡೀ ಬೆಂಗಳೂರನ್ನು ಕಾವೇರಿ ಕೊಳ್ಳದ ವ್ಯಾಪ್ತಿಗೆ ತಂದು

ಬೆಂಗಳೂರಿಗೆ ಕಾವೇರಿ ನೀರಿನಲ್ಲಿ ಹೆಚ್ಚಿನ ಪಾಲು ನೀಡಬೇಕು ಎಂದು ವಾದಿಸಿದರು.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ತಾಯಿ-ಮಗನ ವೈರುಧ್ಯ ನಡೆ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ