
ಕೊಪ್ಪಳ(ಸೆ.20): ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಸಾರ್ವಜನಿಕರು ಸರಿಯಾಗಿಯೇ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ನಗರದ ದೇವರಾಜ ಅರಸ್ ಕಾಲೋನಿಯಲ್ಲಿ ಸೀಮಣ್ಣ, ನಾಗರಾಜ ಅಂಬ ಇಬ್ಬರು ಯುವಕರಿಗೆ ಸಾರ್ವಜನಿಕರು ಗೂಸ ನೀಡಿದ್ದಾರೆ. ಪ್ರೌಢ ಶಾಲೆಗೆ ಹೋಗುತ್ತಿದ್ದ ಹುಡುಗಿಯರನ್ನು ಈ ಇಬ್ಬರು ಯುವಕರು ಚುಡಾಯಿಸುತ್ತಿದ್ದರು ಎನ್ನುವ ಅರೋಪ ಕೇಳಿ ಬಂದಿದೆ.
ಇನ್ನು ಈ ಇಬ್ಬರು ಯುವಕರು ಸೀಮಣ್ಣ, ಕೊಪ್ಪಳ ತಾಲೂಕಿನ ಬೂದಿಹಾಳ ಗ್ರಾಮದವನಾಗಿದ್ದು, ನಾಗರಾಜ ಎಂಬಾತ ಕೊಪ್ಪಳದ ಸಜ್ಜೆಹೊಲ ನಿವಾಸಿ ಎನ್ನಲಾಗಿದೆ. ಸದ್ಯ ಸಾರ್ವಜನಿಕರು ಇಬ್ಬರು ಬೀದಿ ಕಾಮಣ್ಣರನ್ನು ಹಿಡಿದು ಗೂಸ ನೀಡಿ, ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.