ಶಾರುಕ್ ಖಾನ್ ಕಂಪನಿಯ ಕ್ಯಾಂಟೀನ್ ಧ್ವಂಸ ಮಾಡಿದ ಪಾಲಿಕೆ

Published : Oct 06, 2017, 06:11 PM ISTUpdated : Apr 11, 2018, 12:45 PM IST
ಶಾರುಕ್ ಖಾನ್ ಕಂಪನಿಯ ಕ್ಯಾಂಟೀನ್ ಧ್ವಂಸ ಮಾಡಿದ ಪಾಲಿಕೆ

ಸಾರಾಂಶ

ಕ್ಯಾಂಟೀನ್ ಎಂಬುವಂಥದ್ದೇನೂ ಇರಲಿಲ್ಲ. ಅಲ್ಲದೇ, ಕಟ್ಟಡದ ಮಾಲಿಕತ್ವವು ರೆಡ್ ಚಿಲ್ಲೀಸ್ ಕಂಪನಿಯದ್ದಲ್ಲ. ಅದು ಕೇವಲ ಬಾಡಿಗೆದಾರ ಮಾತ್ರ. ಇಡೀ ಕಟ್ಟಡಕ್ಕೆ ಪರಿಸರಸ್ನೇಹಿ ವಿದ್ಯುತ್ ಸೌಲಭ್ಯ ಕೊಡುತ್ತಿದ್ದ ಸೋಲಾರ್ ಪ್ಯಾನ್'ಗಳನ್ನು ಪಾಲಿಕೆ ಧ್ವಂಸ ಮಾಡಿದೆ. ಈ ವಿಚಾರದ ಬಗ್ಗೆ ಪಾಲಿಕೆಯ ಅಧಿಕಾರಿಗಳೊಂದಿಗೆ ತಾನು ಮಾತನಾಡುತ್ತಿರುವುದಾಗಿ ರೆಡ್ ಚಿಲ್ಲೀಸ್ ವಿಎಫ್'ಎಕ್ಸ್ ಸಂಸ್ಥೆ ಹೇಳಿಕೆ ನೀಡಿದೆ.

ಮುಂಬೈ(ಅ. 06): ಬಾಲಿವುಡ್ ಬಾದ್'ಶಾ ಶಾರುಕ್ ಖಾನ್ ಅವರ ಪ್ರೊಡಕ್ಷನ್ ಕಂಪನಿಗೆ ಸೇರಿದ್ದೆನ್ನಲಾದ ಕ್ಯಾಂಟೀನ್ ಕಟ್ಟಡವನ್ನು ಮುಂಬೈ ಪಾಲಿಕೆ ಇಂದು ಧ್ವಂಸ ಮಾಡಿದೆ. ಇಲ್ಲಿಯ ಗೋರೆಗಾಂವ್'ನಲ್ಲಿ ಡಿಎಲ್'ಎಚ್ ಮ್ಯಾಕ್ಸ್ ಎಂಬ ಕಟ್ಟಡದಲ್ಲಿ ಶಾರುಕ್ ಅವರ ರೆಡ್ ಚಿಲ್ಲೀಸ್ ಪ್ರೊಡಕ್ಷನ್ ಕಂಪನಿ ಇದೆ. ಈ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಪಾಲಿಕೆಯ ಅನುಮತಿ ಇಲ್ಲದೇ ಈ ಕ್ಯಾಂಟೀನ್ ನಿರ್ಮಿಸಲಾಗಿದೆ ಎಂಬ ದೂರು ಬಂದಿದ್ದರಿಂದ ಕೆಡವಬೇಕಾಯಿತು. 2 ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡವನ್ನು ತೆರವು ಮಾಡಲಾಯಿತು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೇಳಿಕೆ ನೀಡಿದೆ.

ಅಧಿಕಾರಿಗಳು ಹೇಳುವ ಪ್ರಕಾರ, ರೆಡ್ ಚಿಲ್ಲೀಸ್ ಸಂಸ್ಥೆಯ ಉದ್ಯೋಗಿಗಳಿಗೆಂದು ನಾಲ್ಕನೇ ಮಹಡಿಯಲ್ಲಿ ಕ್ಯಾಂಟೀನ್ ಕಟ್ಟಲಾಗಿತ್ತು. ಇದಕ್ಕೆ ಪಾಲಿಕೆಯ ಅನುಮತಿ ಪಡೆದಿರಲಿಲ್ಲ.

ಆದರೆ, ಶಾರುಕ್ ಖಾನ್ ಅವರ ಸಂಸ್ಥೆ ನೀಡಿರುವ ಸ್ಪಷ್ಟನೆ ಪ್ರಕಾರ, ಪಾಲಿಕೆಯು ಕೆಡವಿರುವುದು ಕ್ಯಾಂಟೀನ್ ಅಲ್ಲ, ಬದಲಾಗಿ ಸೋಲಾರ್ ಪವರ್ ಕೊಡುವ ಉಪಕರಣಗಳಿರುವ ಕಟ್ಟಡವನ್ನಂತೆ. ಕಟ್ಟಡದ ಹೊರಗೆ ಸಿಬ್ಬಂದಿಯ ಊಟಕ್ಕೆಂದು ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಟೀನ್ ಎಂಬುವಂಥದ್ದೇನೂ ಇರಲಿಲ್ಲ. ಅಲ್ಲದೇ, ಕಟ್ಟಡದ ಮಾಲಿಕತ್ವವು ರೆಡ್ ಚಿಲ್ಲೀಸ್ ಕಂಪನಿಯದ್ದಲ್ಲ. ತಾವು ಕೇವಲ ಬಾಡಿಗೆದಾರ ಮಾತ್ರ. ಇಡೀ ಕಟ್ಟಡಕ್ಕೆ ಪರಿಸರಸ್ನೇಹಿ ವಿದ್ಯುತ್ ಸೌಲಭ್ಯ ಕೊಡುತ್ತಿದ್ದ ಸೋಲಾರ್ ಪ್ಯಾನ್'ಗಳನ್ನು ಪಾಲಿಕೆ ಧ್ವಂಸ ಮಾಡಿದೆ. ಈ ವಿಚಾರದ ಬಗ್ಗೆ ಪಾಲಿಕೆಯ ಅಧಿಕಾರಿಗಳೊಂದಿಗೆ ತಾನು ಮಾತನಾಡುತ್ತಿರುವುದಾಗಿ ರೆಡ್ ಚಿಲ್ಲೀಸ್ ವಿಎಫ್'ಎಕ್ಸ್ ಸಂಸ್ಥೆ ಹೇಳಿಕೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ