ಕಪ್ಪುಹಣದಿಂದಲೇ ಭಾರತಕ್ಕೆ ನೆರವು: ಅಖಿಲೇಶ್ ಹೇಳಿಕೆ

Published : Nov 15, 2016, 12:06 PM ISTUpdated : Apr 11, 2018, 01:08 PM IST
ಕಪ್ಪುಹಣದಿಂದಲೇ ಭಾರತಕ್ಕೆ ನೆರವು: ಅಖಿಲೇಶ್ ಹೇಳಿಕೆ

ಸಾರಾಂಶ

"ಸಾಮಾನ್ಯ ಜನರಿಗೆ ಈ ಸರಕಾರ ಭಾರೀ ನೋವು ತಂದಿದೆ. ಬಡವರಿಗೆ ತೊಂದರೆ ಕೊಟ್ಟ ಯಾವುದೇ ಸರಕಾರ ಉಳಿದಿಲ್ಲ" ಎಂದು ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಲಕ್ನೋ(ನ. 15): ಜಾಗತಿಕ ಆರ್ಥಿಕ ಕುಸಿತದ ಕಾಲದಲ್ಲಿ ದೇಶದ ನೆರವಿಗೆ ಬಂದದ್ದು ಕಪ್ಪು ಹಣದ ದಂಧೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಭಾರತ-ಮಯನ್ಮಾರ್-ಥಾಯ್ಲೆಂಡ್ ಫ್ರೆಂಡ್'ಶಿಪ್ ಕಾರ್ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಆದರೆ, ತಾನು ಕಪ್ಪು ಹಣದ ಬೆಂಬಲಿಗನಲ್ಲ ಎಂಬುದನ್ನು ಈ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

"ಕಪ್ಪು ಹಣ ಚಲಾವಣೆಯಾಗಬಾರದು.. ಈ ವಿಚಾರದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೇನೆ. ಜಾಗತಿಕ ಆರ್ಥಿಕ ಕುಸಿತದ ಸಂದರ್ಭಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೊಡೆತ ಬಿದ್ದರೂ ಭಾರತಕ್ಕೆ ಅಂತಹ ಪ್ರತಿಕೂಲ ಅನುಭವವಾಗಿರಲಿಲ್ಲ. ಇದಕ್ಕೆ ಕಾರಣ ಕಪ್ಪು ಹಣದ ಪರ್ಯಾಯ ಆರ್ಥಿಕ ವ್ಯವಸ್ಥೆ. ಇದನ್ನು ಆರ್ಥಿಕ ತಜ್ಞರೇ ಒಪ್ಪಿಕೊಂಡಿದ್ದಾರೆ" ಎಂದು ಅಖಿಲೇಶ್ ಯಾದವ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಬಡವರನ್ನು ಎದುರು ಹಾಕಿಕೊಂಡವರು ಉಳಿದಿಲ್ಲ:
ಕೇಂದ್ರ ಸರಕಾರವು ಕಪ್ಪು ಹಣ ತಡೆಯಲು ತೆಗೆದುಕೊಂಡ ನೋಟು ನಿಷೇಧದ ನಿರ್ಧಾರದಿಂದ ಬಡಜನರಿಗೆ ಅನನುಕೂಲವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡರೂ ಆಗಿರುವ ಅಖಿಲೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸಾಮಾನ್ಯ ಜನರಿಗೆ ಈ ಸರಕಾರ ಭಾರೀ ನೋವು ತಂದಿದೆ. ಬಡವರಿಗೆ ತೊಂದರೆ ಕೊಟ್ಟ ಯಾವುದೇ ಸರಕಾರ ಉಳಿದಿಲ್ಲ" ಎಂದು ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?