ಯುಪಿ ಗೆಲ್ಲಲು 10 ಸಾವಿರ ವಾಟ್ಸಾಪ್ ಗ್ರೂಪ್!

Published : Mar 12, 2017, 06:19 PM ISTUpdated : Apr 11, 2018, 01:01 PM IST
ಯುಪಿ ಗೆಲ್ಲಲು  10 ಸಾವಿರ ವಾಟ್ಸಾಪ್ ಗ್ರೂಪ್!

ಸಾರಾಂಶ

ಈ 900  ರಾಲಿಗಳ ಪೈಕಿ 23ರಲ್ಲಿ ಖುದ್ದು ನರೇಂದ್ರ ಮೋದಿಯೇ ಭಾಗವಹಿಸಿದ್ದರು. ಇದಲ್ಲದೆ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 2ರಿಂದ 4 ಆಯೋಜನೆಗೊಳ್ಳುವಂತೆ ನೋಡಿಕೊಳ್ಳಲಾಗಿತ್ತು. ತನ್ನ ನಾಯಕರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಹೆಲಿಕಾಪ್ಟರ್ ಮೂಲಕವೇ ತೆರಳುವಂತೆ ಮಾಡಿತ್ತು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಲಖನೌ(ಮಾ.12): ಉತ್ತರ ಪ್ರದೇಶದಲ್ಲಿ ಐತಿಹಾಸಿಕ ಬಹುಮತ ಗಳಿಸಿರುವ ಬಿಜೆಪಿ ಅದನ್ನು ಸಂಪಾದಿಸಲು ಪಟ್ಟ ಶ್ರಮದ ಚಿತ್ರಣ ಈಗ ಲಭ್ಯವಾಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಹಿರಿಹಿರಿ ಹಿಗ್ಗಿದ್ದ ಕಮಲ ಪಾಳೆಯ, ದೇಶದ ಅತಿದೊಡ್ಡ ರಾಜ್ಯದ ಗದ್ದುಗೆ ಹಿಡಿಯಲು ಎರಡು ವರ್ಷಗಳ ಹಿಂದೆಯೇ ಕಾರ್ಯಪ್ರವೃತ್ತವಾಗಿತ್ತು. ಇದಕ್ಕಾಗಿ 900  ರಾಲಿ, 67 ಸಾವಿರ ಕಾರ್ಯಕರ್ತರು, 10 ಸಾವಿರ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಬಳಕೆ ಮಾಡಿಕೊಂಡಿತ್ತು ಎಂಬ ಅಂಶ ಬಹಿರಂಗವಾಗಿದೆ.

ಈ 900  ರಾಲಿಗಳ ಪೈಕಿ 23ರಲ್ಲಿ ಖುದ್ದು ನರೇಂದ್ರ ಮೋದಿಯೇ ಭಾಗವಹಿಸಿದ್ದರು. ಇದಲ್ಲದೆ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 2ರಿಂದ 4 ಆಯೋಜನೆಗೊಳ್ಳುವಂತೆ ನೋಡಿಕೊಳ್ಳಲಾಗಿತ್ತು. ತನ್ನ ನಾಯಕರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಹೆಲಿಕಾಪ್ಟರ್ ಮೂಲಕವೇ ತೆರಳುವಂತೆ ಮಾಡಿತ್ತು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ 1,47,401 ಮತಗಟ್ಟೆಗಳಿದ್ದು, ಆ ಪೈಕಿ ಪ್ರತಿ ಮತಗಟ್ಟೆಗೂ 10ರಿಂದ 21 ಸದಸ್ಯರ ತಂಡವನ್ನು ರಚಿಸಲಾಗಿತ್ತು. ‘ಬೂತ್ ವಿಜಯ್ ಅಭಿಯಾನ್’ ಹೆಸರಿನಲ್ಲಿ ಪ್ರತಿ ಮನೆಗೂ ವೋಟರ್ ಸ್ಲಿಪ್ ಕೊಟ್ಟು, ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ವಿನಂತಿಸಿಕೊಳ್ಳಲಾಗಿತ್ತು.

ಪಕ್ಷದ ಎಲ್ಲ ಹಿರಿಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ನಾಯಕತ್ವದ ವಿರುದ್ಧ ಮಾತನಾಡದಂತೆ ನೋಡಿಕೊಳ್ಳಲಾಗಿತ್ತು. ಹಲವು ಹಿರಿಯ ಮುಖಂಡರ ಪುತ್ರರಿಗೆ ಟಿಕೆಟ್ ಕೊಟ್ಟು ಅವರು ಸಂತೋಷದಿಂದ ಪ್ರಚಾರದಲ್ಲಿ ಭಾಗಿಯಾಗುವಂತೆ ಮಾಡಲಾಗಿತ್ತು.

ಮಾಯಾವತಿ ಮತ ಬ್ಯಾಂಕ್ ಆಗಿರುವ ದಲಿತ ಮತಗಳ ಮೇಲೆ ಕಣ್ಣಿಟ್ಟು ಮಾಜಿ ಸಂಸದ, ಬೌದ್ಧ ನಾಯಕ ಧಮ್ಮಾ ವಿರಿಯೋ ನೇತೃತ್ವದಲ್ಲಿ ‘ಧಮ್ಮ ಚೇತನ ಯಾತ್ರೆ’ಯನ್ನು ಕಳೆದ ವರ್ಷ ಆಯೋಜಿಸಿ ದಲಿತ- ಒಬಿಸಿ ಬಾಹುಳ್ಯದ 175 ಕ್ಷೇತ್ರಗಳಲ್ಲಿ ಸುತ್ತಾಡುವಂತೆ ಮಾಡಲಾಗಿತ್ತು. ಪ್ರತಿ ಕ್ಷೇತ್ರದಲ್ಲೂ ಪರಿವರ್ತನೆ ಯಾತ್ರೆ ನಡೆಸಲಾಯಿತು. ಕಾಲೇಜುಗಳಿಗೆ ತೆರಳಿ ಯುವ ಮತದಾರರನ್ನು ಸೆಳೆಯಲಾಯಿತು. ಯುವ ಸಮ್ಮೇಳನ, ಮಹಿಳಾ ಸಮ್ಮೇಳನ, ಒಬಿಸಿ ಸಮ್ಮೇಳನ, ಎಸ್ಸಿ/ಎಸ್ಟಿಗಳಿಗಾಗಿ ಸ್ವಾಭಿಮಾನಿ ಸಮ್ಮೇಳನ ಹಾಗೂ ವ್ಯಾಪಾರಿ ಸಮ್ಮೇಳನಗಳನ್ನು ಆಯೋಜಿಸಿ ಪ್ರತಿ ವರ್ಗವನ್ನೂ ಓಲೈಸಲಾಯಿತು. ಅದರ ಲ ಈಗ ಸಿಕ್ಕಿದೆ ಎಂದು ನಾಯಕರು ಹೇಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ: ಸಚಿವ ಎಂ.ಬಿ.ಪಾಟೀಲ್
Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ