ಕಲಾ ಮಂದಿರದೊಳಗೆ ಗೋಮಾಂಸ ಸೇವಿಸಿದ್ದಾರೆಂದು ಗೋಮೂತ್ರ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು

Published : Jun 26, 2017, 04:52 PM ISTUpdated : Apr 11, 2018, 01:13 PM IST
ಕಲಾ ಮಂದಿರದೊಳಗೆ ಗೋಮಾಂಸ ಸೇವಿಸಿದ್ದಾರೆಂದು ಗೋಮೂತ್ರ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು

ಸಾರಾಂಶ

ಸಂಘಟನೆಯೊಂದರ ಕೆಲವು ಸದಸ್ಯರು ನಿನ್ನೆ ಇಲ್ಲಿನ ಸರ್ಕಾರ ಕಟ್ಟಡ ಕಲಾ ಮಂದಿರದಲ್ಲಿ ಗೋಮಾಂಸ ಸೇವಿಸಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಇಂದು ಕಟ್ಟಡಕ್ಕೆ ಗೋಮೂತ್ರ ಸಿಂಪಡಿಸಿರುವ ಮಜವಾದ ಘಟನೆ ನಡೆದಿದೆ.

ಮೈಸೂರು (ಜೂ.26): ಸಂಘಟನೆಯೊಂದರ ಕೆಲವು ಸದಸ್ಯರು ನಿನ್ನೆ ಇಲ್ಲಿನ ಸರ್ಕಾರ ಕಟ್ಟಡ ಕಲಾ ಮಂದಿರದಲ್ಲಿ ಗೋಮಾಂಸ ಸೇವಿಸಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಇಂದು ಕಟ್ಟಡಕ್ಕೆ ಗೋಮೂತ್ರ ಸಿಂಪಡಿಸಿರುವ ಮಜವಾದ ಘಟನೆ ನಡೆದಿದೆ.

ಚಾರ್ವಿಕ ಎನ್ನುವ ಸಂಘಟನೆ ಆಹಾರ ಅಭ್ಯಾಸದ ಬಗ್ಗೆ ಮೂರು ದಿನಗಳ ಸೆಮಿನಾರನ್ನು ಆಯೋಜಿಸಿತ್ತು. ಚಿಂತಕ ಭಗವಾನ್ ಕೂಡಾ ಇದರಲ್ಲಿ ಭಾಗವಹಿಸಿದ್ದರು. ಕೊನೆಯ ದಿನ ಉಳಿದ ಸದಸ್ಯರುಗಳೊಂದಿಗೆ ಸೇರಿ ಮಾಂಸವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ಇವರು ಸೇವಿಸಿದ್ದು ಮಾಂಸವಲ್ಲ ಬದಲಿಗೆ ಗೋಮಾಂಸವೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಲಾ ಮಂದಿರದೊಳಗೆ ಆಹಾರವನ್ನು ಸೇವಿಸುವಂತಿಲ್ಲ. ಅದಾಗ್ಯೂ ಸೇವಿಸಿದ ಸಂಘಟನೆಗೆ ಜಿಲ್ಲಾಧಿಕಾರಿ ನೊಟೀಸ್ ನೀಡಿದೆ. ಸಂಘಟನೆ ಕಾರ್ಯಕ್ರಮ ಆಯೋಜಿಸುವುದಕ್ಕೂ ಮುನ್ನ ಇಟ್ಟಿದ್ದ 5 ಸಾವಿರ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಕಲಾ ಮಂದಿರದೊಳಗೆ ಮಾಂಸ ಸೇವಿಸಿದ್ದಕ್ಕಾಗಿ ನೊಟೀಸ್ ನೀಡಲಾಗಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಜೊತೆಗೆ ಅನುಮತಿಯನ್ನು ತೆಗೆದುಕೊಳ್ಳಬೇಕು. ಸೆಮಿನಾರ್ ನಡೆಸಲು ಅನುಮತಿಯನ್ನು ಪಡೆದಿದ್ದಾರೆಯೇ ವಿನಃ ಆಹಾರ ಸೇವಿಸುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ ಎಂದು ಜಿಲ್ಲಾಧಿಕಾರಿ ರಣದೀಪ್ ಡಿ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌