ದಿಲ್ಲಿ ಚುನಾವಣೆ: ಬಿಜೆಪಿ ಕ್ಲೀನ್ ಸ್ವೀಪ್; ಆಪ್'ಗೆ ಮುಖಭಂಗ

Published : Apr 26, 2017, 11:35 AM ISTUpdated : Apr 11, 2018, 12:44 PM IST
ದಿಲ್ಲಿ ಚುನಾವಣೆ: ಬಿಜೆಪಿ ಕ್ಲೀನ್ ಸ್ವೀಪ್; ಆಪ್'ಗೆ ಮುಖಭಂಗ

ಸಾರಾಂಶ

ಬಿಜೆಪಿಯಲ್ಲಿ ನಂಬಿಕೆ ಇಟ್ಟು ಗೆಲ್ಲಿಸಿದ್ದಕ್ಕಾಗಿ ದಿಲ್ಲಿ ಜನತೆಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಬಿಜೆಪಿ ಗೆಲುವನ್ನು ಇತ್ತೀಚೆಗೆ ನಕ್ಸಲ್ ದಾಳಿಗೆ ಬಲಿಯಾದ ಸಿಆರ್'ಪಿಎಫ್ ಜವಾನರಿಗೆ ಅರ್ಪಿಸಿದ್ದಾರೆ.

ನವದೆಹಲಿ(ಏ. 26): ದೆಹಲಿ ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಭಾರಿಸಿದೆ. ರಾಜಧಾನಿಯ ಮೂರೂ ನಗರಪಾಲಿಕೆಗಳನ್ನು ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಉಳಿಸಿಕೊಂಡಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳೂ ನಿಜಗೊಂಡಿವೆ. ವಿಧಾನಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಪಕ್ಷ ಕೂಡ ನೆಲಕಚ್ಚಿದೆ.

ಮೂರು ಪಾಲಿಕೆಗಳನ್ನು ಸೇರಿ ಒಟ್ಟು 270 ಸ್ಥಾನಗಳ ಪೈಕಿ ಬಿಜೆಪಿ 185 ಕ್ಷೇತ್ರಗಳಲ್ಲಿ ಗೆದ್ದಿದೆ. ಆಮ್ ಆದ್ಮಿ ಮತ್ತು ಕಾಂಗ್ರೆಸ್ ತಲಾ 46 ಮತ್ತು 28 ಸ್ಥಾನಗಳಲ್ಲಿ ಜಯಸಿವೆ.

ಉತ್ತರ ದೆಹಲಿ ನಗರಪಾಲಿಕೆ, ದಕ್ಷಿಣ ದೆಹಲಿ ನಗರಪಾಲಿಕೆ ಮತ್ತು ಪೂರ್ವದೆಹಲಿ ನಗರಪಾಲಿಕೆ ಈ ಮೂರರಲ್ಲೂ ಬಿಜೆಪಿ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿಯಲ್ಲಿ ನಂಬಿಕೆ ಇಟ್ಟು ಗೆಲ್ಲಿಸಿದ್ದಕ್ಕಾಗಿ ದಿಲ್ಲಿ ಜನತೆಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಬಿಜೆಪಿ ಗೆಲುವನ್ನು ಇತ್ತೀಚೆಗೆ ನಕ್ಸಲ್ ದಾಳಿಗೆ ಬಲಿಯಾದ ಸಿಆರ್'ಪಿಎಫ್ ಜವಾನರಿಗೆ ಅರ್ಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ವೇಳೆ ಬಿಜೆಪಿಗೆ ಅಭಿನಂದನೆ ತಿಳಿಸಿದ್ದಾರೆ. ಮೂರು ನಗರಪಾಲಿಕೆಗಳ ಜೊತೆ ತಮ್ಮ ಸರಕಾರ ಸಹಕರಿಸಿ ದಿಲ್ಲಿಯ ಅಭಿವೃದ್ಧಿಗೆ ಪ್ರಯತ್ನಿಸುವುದು ಎಂದು ಜನತೆಗೆ ಭರವಸೆ ನೀಡಿದ್ದಾರೆ.

ದೆಹಲಿ ಮಹಾನಗರಪಾಲಿಕೆ ಚುನಾವಣೆ ವಿವರ:

ಒಟ್ಟು ಸ್ಥಾನಗಳು: 270
ಬಿಜೆಪಿ: 185
ಕಾಂಗ್ರೆಸ್: 28
ಎಎಪಿ: 46
ಇತರೆ: 11

ಉತ್ತರ ದೆಹಲಿ ಪಾಲಿಕೆ (103)
ಬಿಜೆಪಿ: 65
ಕಾಂಗ್ರೆಸ್: 13
ಎಎಪಿ: 22
ಇತರೆ: 03

ದಕ್ಷಿಣ ದೆಹಲಿ ಪಾಲಿಕೆ (103)
ಬಿಜೆಪಿ: 71
ಕಾಂಗ್ರೆಸ್: 12
ಎಎಪಿ: 15
ಇತರೆ: 06

ಪೂರ್ವ ದೆಹಲಿ ಪಾಲಿಕೆ (103)
ಬಿಜೆಪಿ: 49
ಕಾಂಗ್ರೆಸ್: 03
ಎಎಪಿ: 09
ಇತರೆ: 02

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ