ಭಾರತ್ ಬಂದ್ ಧಿಕ್ಕರಿಸಲು ಕರ್ನಾಟಕ ಬಿಜೆಪಿ ಕರೆ

By Web DeskFirst Published Jan 7, 2019, 9:20 PM IST
Highlights

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಬಂದ್ ಕರೆ ನೀಡಿದೆ. ಜನವರಿ 8 ಹಾಗೂ 9 ರಂದು ಎರಡು ದಿನಗಳ ಕಾಲ ಬಂದ್‌ಗೆ ಕರೆನೀಡಲಾಗಿದೆ. ಆದರೆ ರಾಜ್ಯ ಬಿಜೆಪಿ ಈ ಬಂದ್‌ಗೆ ಧಿಕ್ಕಾರ ಹೇಳಿದೆ.

ಬೆಂಗಳೂರು[ಜ.07] ಕಾರ್ಮಿಕ ಸಂಘಟನೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶಕ್ಕೆ ಕರೆ ನೀಡಿರುವ ಬಂದ್‌ಗೆ ಯಾವುದೆ ಅರ್ಥವಿಲ್ಲ. ವಾಸ್ತವಿಕತೆಯಿಂದ ದೂರ ಇರುವ ಈ ಬಂದ್‌ನ್ನು ಧಿಕ್ಕರಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮನವಿ ಮಾಡಿದ್ದಾರೆ.

ನಿರುದ್ಯೋಗ, ಬೆಲೆ  ಏರಿಕೆ ಮತ್ತು ಕೇಂದ್ರ ಸರಕಾರದ ಆರ್ಥಿಕ ನೀತಿ ವಿರೋಧಿಸಿ ಕರೆನೀಡಿರುವ ಬಂದ್‌ಗೆ ಅರ್ಥವಿಲ್ಲ. ಕಳೆದ 4 ವರ್ಷದಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಕಪೋ ಕಲ್ಪಿತ ಅಂಕಿ ಅಂಶಗಳ ಆಧಾರದಲ್ಲಿ ಬಂದ್‌ಗೆ ಕರೆ  ನೀಡಿರುವುದು ಖಂಡನೀಯ ಎಂದಿದ್ದಾರೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ 15 ವರ್ಷಗಳಿಂದ ನಡೆಯುತ್ತಿರುವ ಪ್ರಕ್ರಿಯೆ. ಇದನ್ನು ಮೋದಿ ಸರಕಾರ ಕೈಗೊಂಡಿಲ್ಲ.ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿರಿಸಿ ರಾಜಕೀಯ ಲಾಭಕ್ಕಾಗಿ ಹಮ್ಮಿಕೊಂಡಿರುವ ಬಂದ್ ಧಿಕ್ಕರಿಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.

ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

click me!