ಸಂಸ್ಕಾರವಿಲ್ಲದ ಮಕ್ಕಳನ್ನು ಹೆರುವ ಬದಲು ಬಂಜೆಯಾಗಿಯೇ ಇದ್ದು ಬಿಡಿ; ಬಿಜೆಪಿ ಶಾಸಕ

Published : Jun 14, 2018, 11:26 AM ISTUpdated : Jun 14, 2018, 11:38 AM IST
ಸಂಸ್ಕಾರವಿಲ್ಲದ ಮಕ್ಕಳನ್ನು ಹೆರುವ ಬದಲು ಬಂಜೆಯಾಗಿಯೇ ಇದ್ದು ಬಿಡಿ; ಬಿಜೆಪಿ ಶಾಸಕ

ಸಾರಾಂಶ

ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಗರ್ಭಿಣಿಯಾಗದೇ ಉಳಿದು ಬಿಡಿ ಎಂದು ಬಿಜೆಪಿ ಶಾಸಕ ಪನ್ನಲಾಲ್ ಶಕ್ಯ ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಕೆಲವು ಮಹಿಳೆಯರು ಉಪಯೋಗಕ್ಕೆ ಬಾರದ ನಾಯಕರಿಗೆ ಜನ್ಮ  ನೀಡಿದ್ದಾರೆ. ಅಂತಹ ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಮಹಿಳೆಯರು ಹಾಗೆಯೇ ಉಳಿದು ಬಿಡಬೇಕು ಎಂದು ಬಿಜೆಪಿ ಶಾಸಕ ಶಕ್ಯ ಹೇಳಿಕೆ ನೀಡಿದ್ದಾರೆ. 

ನವದೆಹಲಿ (ಜೂ. 14): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿ ಎಂಎಲ್ ಎ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಗರ್ಭಿಣಿಯಾಗದೇ ಉಳಿದು ಬಿಡಿ ಎಂದು ಬಿಜೆಪಿ ಶಾಸಕ ಪನ್ನಲಾಲ್ ಶಕ್ಯ ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಕಾಂಗ್ರೆಸ್ ಗರೀಬಿ ಹಟಾವೋ ಎಂಬ ಘೋಷವಾಕ್ಯ ಮೂಲಕ ಹುಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ನಾಯಕರು ಬಡತನವನ್ನು ಮಾತ್ರ ಇದುವರೆಗೆ ನಿರ್ಮೂಲನೆ ಮಾಡಿಲ್ಲ. ಕೆಲವು ಮಹಿಳೆಯರು ಉಪಯೋಗಕ್ಕೆ ಬಾರದ ನಾಯಕರಿಗೆ ಜನ್ಮ  ನೀಡಿದ್ದಾರೆ. ಅಂತಹ ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಮಹಿಳೆಯರು ಹಾಗೆಯೇ ಉಳಿದು ಬಿಡಬೇಕು ಎಂದು ಬಿಜೆಪಿ ಶಾಸಕ ಶಕ್ಯ ಹೇಳಿಕೆ ನೀಡಿದ್ದಾರೆ. 

ಶಕ್ಯರವರು ಈ ರೀತಿ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಹೊರ ದೇಶದಲ್ಲಿ ಮದುವೆಯಾಗಿರುವುದನ್ನು ಇವರು ಪ್ರಶ್ನಿಸಿದ್ದರು. ವಿರಾಟ್ ಕೊಹ್ಲಿ ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಹಣ, ಖ್ಯಾತಿ ಗಳಿಸಿ ಹೊರ ದೇಶದಲ್ಲಿ ಮದುವೆ ಆಗಿರುವುದು ದೇಶಭಕ್ತಿಯಲ್ಲ ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.     

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ