ಶ್ರೀರಾಮುಲು ಸಿಎಂ ಹೇಳಿಕೆ, ವಿ.ಸೋಮಣ್ಣ ನೀಡಿದ ಸ್ಪಷ್ಟನೆ ಏನು?

By Web DeskFirst Published Oct 26, 2018, 4:25 PM IST
Highlights

ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಮುಖಂಡ, ಶಾಸಕ ವಿ.ಸೋಮಣ್ಣ ನೀಡಿದ್ದ ಹೇಳಿಕೆಗೆ ಬಿಜೆಪಿಯ್ಲಲೇ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸೋಮಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿ(ಅ.26) ಶ್ರೀರಾಮುಲು ಸಿಎಂ ಆಗುತ್ತಾರೆ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಬಳ್ಳಾರಿಯಲ್ಲಿ ಬಿಜೆಪಿ ಮುಖಂಡ, ಶಾಸಕ ವಿ.ಸೋಮಣ್ಣ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ.ಶ್ರೀರಾಮುಲು ಸಿಎಂ ಆಗುತ್ತಾರೆ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧ

ಲೋಕಸಭಾ ಉಪ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತದೆ. ಆಗ ಹೈಕಮಾಂಡ್ ನಿರ್ಧರಿಸಿದಂತೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಬಳ್ಳಾರಿ ಪ್ರಭಾವಿ ಹಿಂದುಳಿದ ನಾಯಕ ಶ್ರೀರಾಮುಲು ವರ್ಚಸ್ಸಿದೆ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದ್ದೆ ಎಂದಿದ್ದಾರೆ.

ಯಡಿಯೂರಪ್ಪ ಅವರ ಜೊತೆ ವೈಮನಸ್ಸಿನಿಂದ ಹೇಳಿಕೆ ನೀಡಿಲ್ಲ. ಉಪ ಚುನಾವಣೆ ಕಾರಣಕ್ಕೆ ನೀಡಿದ ಹೇಳಿಕೆಯೂ ಅಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಸ್ನೇಹಿತರು. ಆದರೆ ಅವರು ಶ್ರೀರಾಮುಲು ಬಗ್ಗೆ ಮಾತನಾಡುವಾಗ ಬಳಸಿದ ಭಾಷೆ ಸರಿಯಲ್ಲ. ಈ ಉಪ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂದು ಸೋಮಣ್ಣ ಭವಿಷ್ಯ ನುಡಿದಿದ್ದಾರೆ.

click me!