
ಒಂದು ಕಾಲದಲ್ಲಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸ್ದಿ ಅಂದು ಕಾಂಗ್ರೆಸ್ ನಲ್ಲಿದ್ದ ಇಂದಿನ ಬಿಜೆಪಿ ನಾಯಕಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರನ್ನು ಹಾಡಿ ಹೊಗಳಿದ್ದಾರೆ. ಅರೇ ಯಾವಾಗಲೂ ವಾಗ್ದಾಳಿ ಮಾಡುತ್ತ ಇರುವ ಇವರು ಇದೇನು ಮಾತಿನ ವರಸೆ ಬದಲಾಯಿದ್ರಾ? ಈ ಸುದ್ದಿ ಓದಿ..
ಬೆಂಗಳೂರು[ಜು.13] ವಿಧಾನ ಪರಿಷತ್ ನಲ್ಲಿ ಎಚ್.ಡಿ.ರೇವಣ್ಣ ಅವರನ್ನು ಹಾಡಿ ಹೊಗಳಿದ ತೇಜಸ್ವಿನಿ, ಎಚ್.ಡಿ.ರೇವಣ್ಣ ಅವರನ್ನು ಸೂಪರ್ ಸಿಎಂ ಅಂತಾರೆ. ಸೂಪರ್ ಮೂನ್ ಅಂದ್ರೆ ಹೆಚ್ಚು ಬೆಳಕು ನೀಡುವಂತದ್ದು ರೇವಣ್ಣ ರಾಜಕೀಯಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ್ದಾರೆ ಅವರ ಅನುಭವ ದೊಡ್ಡದು ಎಂದರು.
ಆದರೆ ಕುಮಾರಸ್ವಾಮಿ ಅವರಿಗೆ ಅದೃಷ್ಟ ಇದೆ. ತಮ್ಮ ಸಿಎಂ ಆದಾಗ ರೇವಣ್ಣ ಅವ್ರಿಗೆ ದೊಡ್ಡ ಸಂಭ್ರಮ. ಇಂದಿಗೂ ರೇವಣ್ಣ ರನ್ನು ನೋಡಿದರೆ ಖುಷಿಯಾಗುತ್ತದೆ ಎಂದು ಹೇಳಿದರು.ಬಿಜೆಪಿ ವಕ್ತಾರೆಯಾಗಿ ಕೆಲಸ ಮಾಡಿಕೊಂಡು ಬಂದಿದ್ದ ತೇಜಸ್ವಿನಿ ಗೌಡ ಮೊದಲು ಕಾಂಗ್ರೆಸ್ ನಲ್ಲಿದ್ದರು. ಲೋಕಸಭಾ ಚುನಾವಣೆಯೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣು ಮುಕ್ಕಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.