
ಹಾವೇರಿ : ಪ್ರಧಾನಿ ನರೇಂದ್ರ ಮೋದಿ 30 ಸಾವಿರ ಕೋಟಿ ಹಣವನ್ನು ಅಂಬಾನಿ ಜೇಬಿಗೆ ಇಳಿಸಿದ್ದಾರೆ ಎನ್ನುವ ಆರೋಪ ಸಂಬಂಧ ಸಂಸದೆ ಶೋಭಾ ಕರಂದ್ಲಾಜೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಹುಲ್ ಗಾಂಧಿಯವರ ಖಾಂದಾನ್ ಭ್ರಷ್ಟಾಚಾರದಿಂದಲೇ ಬಂದಿದೆ. ಇಂದಿರಾ ಗಾಂಧಿಯಿಂದ ಹಿಡಿದು ರಾಹುಲ್ ತನಕ ಭ್ರಷ್ಟಾಚಾರ ಪೋಷಣೆಯಾಗಿದೆ.
ಈ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರವ್ ಮೋದಿ, ಮಲ್ಯ ಪೋಷಿಸಿದ್ದೇ ಯುಪಿಎ. ರಾಹುಲ್ ಗಾಂಧಿ ಈ ಬಗ್ಗೆ ಅವರ ತಾಯಿ ಸೋನಿಯಾ ಗಾಂಧಿ ಬಳಿ ಕೇಳಲಿ.
ನಮ್ಮ ನರೇಂದ್ರ ಮೋದಿ 12 ವರ್ಷ ಕಪ್ಪು ಚುಕ್ಕೆಯಿಲ್ಲದೇ ಗುಜರಾತ್ ಮುಖ್ಯಮಂತ್ರಿ ಆಗಿದ್ದರು. ಅವರಿಗೆ ಖಾಂದನ್ ಬೆಳೆಸುವ ಅವಶ್ಯಕತೆ, ಅನಿವಾರ್ಯತೆ ಇಲ್ಲ, ಅವರಿಗೆ ಮಕ್ಕಳಿಲ್ಲ. ನಿಮ್ಮ ಕುಟುಂಬದ ಹಣ ಸ್ವಿಟ್ಜರ್ಲೆಂಡ್ ನಲ್ಲಿ ಎಷ್ಟಿದೆ? ಈ ಬಗ್ಗೆ ತನಿಖೆಯಾಗಲಿ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಇನ್ನು ರಾಹುಲ್ ಗಾಂಧಿ ಒಂದು ಬೆರಳು ಬೇರೆಯವರಿಗೆ ತೋರಿಸಿದರೆ ಇನ್ನೊಂದು ಬೆರಳು ಅವರಿಗೆ ತೋರಿಸುತ್ತೆದೆ. ದೇಶ ರಾಹುಲ್ ಭಾಷಣ ಕೇಳಿ ನಗುತ್ತಿದೆ, ಸೋಲಿನ ಭೀತಿಯಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ.
ಅನಿಲ್ ಅಂಬಾನಿಗೆ ಸಿಕ್ಕಿರೋ ಟೆಂಡರ್ ಎಷ್ಟು ಎನ್ನುವ ಕನಿಷ್ಟ ಜ್ಞಾನ ಇರಬೇಕು. ಅದರ ಮೌಲ್ಯ ಎಷ್ಟು ಎನ್ನುವುದನ್ನು ಮೊದಲು ಅಧ್ಯಯನ ಮಾಡಲಿ. ಟೆಂಡರ್ ಮೌಲ್ಯ 1500 ಕೋಟಿಗಿಂತ ಜಾಸ್ತಿ ಇಲ್ಲ. ಹೀಗಾಗಿ ರಾಹುಲ್ ಮತ್ತೆ ಕಲಿತ ಶಾಲೆಗೆ ಹೋಗಿ ಲೆಕ್ಕದ ಪಾಠ ಕಲಿಯಲಿ ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.