
ನವದೆಹಲಿ(ಜ.08): ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಎಲ್ಲಾ ವೇದಿಕೆಗಳಲ್ಲೂ ಚರ್ಚೆಯಾಗುತ್ತಿದೆ. ಅದರಲ್ಲೂ ರಫೆಲ್ ಯುದ್ಧ ವಿಮಾನ ತಯಾರಿಸಲು ಹೆಚ್ಎಎಲ್ಗೆ ಏಕೆ ಕೊಟ್ಟಿಲ್ಲ ಎಂಬ ಚರ್ಚೆಯಂತೂ ಭಾರೀ ಮಹತ್ವ ಪಡೆದುಕೊಂಡಿದೆ.
ದೇಶದ ಮಾಧ್ಯಮಗಳಂತೂ ರಫೆಲ್ ಒಪ್ಪಂದ ಮತ್ತು ಹೆಚ್ಎಎಲ್ ಕುರಿತು ನಿತ್ಯವೂ ಗಂಭೀರ ಚರ್ಚೆಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಈ ಚರ್ಚೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ವಕ್ತಾರರು ಪಾಲ್ಗೊಂಡು ತಮ್ಮ ತಮ್ಮ ವಾದ ಮಂಡಿಸುತ್ತಿದ್ದಾರೆ.
ಅದರಂತೆ ದೇಶದ ಜನಪ್ರಿಯ ನ್ಯೂಸ್ ಚಾನೆಲ್ಗಳಲ್ಲಿ ಒಂದಾದ ‘ಆಜ್ ತಕ್’ನಲ್ಲಿ ಹೆಚ್ಎಎಲ್ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಸಂಸ್ಥೆಗೆ ಅಪಹಾಸ್ಯ ಮಾಡುವಂತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ ಹೆಚ್ಎಎಲ್ ಬಳಿ ಹಣವಿಲ್ಲ ಎಂದು ಖುದ್ದು ಸಂಸ್ಥೆಯ ಮುಖ್ಯಸ್ಥರೇ ಹೇಳಿದ್ದಾರಲ್ಲ ಎಂದು ಆ್ಯಂಕರ್ ಶಾನವಾಜ್ ಹುಸೇನ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉಡಾಫೆಯಿಂದ ಉತ್ತರಿಸಿರುವ ಹುಸೇನ್, ನಮ್ಮದು ಕ್ಯಾಶಲೆಸ್ ಎಕಾನಮಿಯಾಗಿದ್ದು, ಹೆಚ್ಎಎಲ್ ಕೈಗೆ ನಾವೇಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ಭಾರತ ಸದ್ಯ ಕ್ಯಾಶಲೆಸ್ ಎಕಾನಮಿಯನ್ನು ಅಳವಡಿಸಿಕೊಂಡಿದ್ದು, ಹೆಚ್ಎಎಲ್ ಗೆ ಹಣದ ಅವಶ್ಯಕತೆ ಏನಿದೆ ಎಂದು ಶಾನವಾಜ್ ಹುಸೇನ್ ಪ್ರಶ್ನಿಸಿದ್ದಾರೆ. ಶಾನವಾಜ್ ಅವರ ಈ ಹೇಳಿಕೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.