
ನವದೆಹಲಿ(ನ.27): 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪ್ರತಿಪಕ್ಷಗಳು ನಾಳೆ ಭಾರತ್ ಬಂದ್ಗೆ ಕರೆ ನೀಡಿವೆ. ಹಾಗಾದರೆ, ಬೆಂಬಲ ಕೊಟ್ಟಿರುವುದು ಯಾರು? ನಾಳೆ ಏನು ಸಿಗುತ್ತೆ? ಏನು ಸಿಗಲ್ಲ ಇಲ್ಲಿದೆ ವಿವರ.
500 ಹಾಗೂ 1000 ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರತ್ ಬಂದ್ ಸಬಂಧ ಸಿಎಂ ಸಿದ್ರಾಮಯ್ಯ ಕೊಟ್ಟಿರೋ ರಿಯಾಕ್ಷನ್. ಈ ಬಂದ್ಗೆ ಬೆಂಬಲವಿಲ್ಲ ಅಂತ ಮುಖ್ಯಮಂತ್ರಿ ಹೇಳಿದರೂ ಆಪ್ತ ಮೂಲಗಳ ಪ್ರಕಾರ ಸುಳ್ಳು. ಕೇಂದ್ರದ ಬಿಜೆಪಿ ನಿಲುವು ಖಂಡಿಸಿ ನಾಳೆ ನಡೆಯಲಿರುವ ಹೋರಾಟ ಯಶಸ್ಸು ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಇನ್ನೂ ಬಂದ್ ದಿನ ಏನೆಲ್ಲಾ ಸಿಗುತ್ತದಾ ಎನ್ನುವುದನ್ನು ನೋಡುವುದಾದರೇ
ಹಾಲು, ಪೇಪರ್, ಆಸ್ಪತ್ರೆ, ಔಷಧಿ ಎಂದಿನಂತೆ ಮಾರುಕಟ್ಟೆ ವಹಿವಾಟು, ರೈಲು ಸೇವೆ ನಿರಾತಂಕ
- ಬಿಎಂಟಿಸಿ ,ಕೆಎಸ್ಆರ್ಟಿಸಿ , ಮೆಟ್ರೋ
- ಸರ್ಕಾರಿ ಕಚೇರಿ ಸೇವೆ ಅನುಮಾನ
-ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ ಸೇವೆ ಡೌಟ್
- ಪೆಟ್ರೋಲ್ , ಸಿನಿಮಾ ಪ್ರದರ್ಶನ ಸ್ಪಷ್ಟನೆ ಇಲ್ಲ
- ಅಂಗಡಿ-ಮುಂಗಟ್ಟು ವಹಿವಾಟು ಅನುಮಾನ
- ಶಾಲಾ-ಕಾಲೇಜು ಕಾರ್ಯನಿರ್ವಹಣೆ ಇಲ್ಲ?
- ಹೋಟೆಲ್, ಬ್ಯಾಂಕ್ ಸೇವೆ ಬಗ್ಗೆ ಸ್ಪಷ್ಟತೆ ಇಲ್ಲ
ಈ ಮಧ್ಯೆ ನೋಟು ಬಂದ್'ನಿಂದ ಆಗಿರುವ ಅವ್ಯವಸ್ಥೆಯನ್ನು ಪರಿಗಣಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಸಹ ಬಂದ್ಗೆ ಬೆಂಬಲ ನೀಡಿದ್ದಾರೆ. ಆದರೆ ಮೋದಿ ಅಭಿಮಾನಿಗಳು ಸೋಮವಾರದಿಂದ ಸಂಭ್ರಮ ದಿವಸ ಆಚರಿಸುತ್ತಿದ್ದಾರೆ.
ಒಟ್ನಲ್ಲಿ , ಆಕ್ರೋಶ್ ದಿವಸ್ ಎಂದರೆ ಭಾರತ್ ಬಂದ್ ಯಶಸ್ವಿಯಾಗಲು ರಾಜ್ಯ ಸರ್ಕಾರ ಸಿದ್ಧತೆಯನ್ನು ತೆರೆಮರೆಯಲ್ಲಿ ಮಾಡಿಕೊಳ್ತಿದೆ. ಆದ್ರೆ, ಬಿಜೆಪಿ ಸೇರಿ ವಿವಿಧ ಸಂಘಟನೆಗಳು ಬೆಂಬಲ ಘೋಷಸದಿರುವುದು ಅಷ್ಟು ಪರಿಣಾಮ ಬೀರಲ್ಲ ಅಂತ ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.