ರೆಡ್ಡಿ ಮಗಳ ಮದುವೆಗೆ ಹೋಗಬಾರದೆಂದು ಖಡಕ್ ಸೂಚನೆ ನೀಡಿದ ಹೈಕಮಾಂಡ್

Published : Nov 15, 2016, 07:19 AM ISTUpdated : Apr 11, 2018, 01:11 PM IST
ರೆಡ್ಡಿ ಮಗಳ ಮದುವೆಗೆ ಹೋಗಬಾರದೆಂದು ಖಡಕ್ ಸೂಚನೆ ನೀಡಿದ ಹೈಕಮಾಂಡ್

ಸಾರಾಂಶ

ಅಲ್ಲದೆ ರೆಡ್ಡಿ ಪುತ್ರಿ ವಿವಾಹದ ವೆಚ್ಚಕ್ಕಾಗಿ ಕಪ್ಪುಹಣ ಬಳಕೆಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಬೆಂಗಳೂರು(ನ.15): ಜನಾರ್ದನ ರೆಡ್ಡಿ ಪತ್ರಿ ಮದುವೆಗೆ ರಾಜ್ಯ ಬಿಜೆಪಿ ನಾಯಕರು ಹೋಗಬಾರದೆಂದು ಬಿಜೆಪಿ ಹೈಕಮಾಂಡ್ ಖಡಖ್ ಸೂಚನೆ ನೀಡಿದೆ. ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಈ ಸ್ಥತಿಯಲ್ಲಿ ರೆಡ್ಡಿ ಮಗಳ ವಿವಾಹಕ್ಕೆ ಹೋಗುವುದು ಬೇಡ ಎಂದು ಸೂಚಿಸಿದೆ. ಅಲ್ಲದೆ ರೆಡ್ಡಿ ಪುತ್ರಿ ವಿವಾಹದ ವೆಚ್ಚಕ್ಕಾಗಿ ಕಪ್ಪುಹಣ ಬಳಕೆಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಮೈಸೂರಿನಲ್ಲಿ ಆರೋಪ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ವಿವಾಹದ ವೆಚ್ಚದ ಕುರಿತು ಐಟಿ ತನಿಖೆಗೂ ಆಗ್ರಹಿಸಿದ್ದಾರೆ. ಬಹುತೇಕ ಕಾಂಗ್ರೆಸ್​ ನಾಯಕರು ಸಹ ಆರೋಪಿಸಿರುವ ಹಿನ್ನೆಲೆಯಲ್ಲಿ ರೆಡ್ಡಿಯ ಪುತ್ರಿಯ ವಿವಾಹದಲ್ಲಿ ಭಾಗಿಯಾಗುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್​ ಸ್ಪಷ್ಟ ಆದೇಶ ನೀಡಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಾಳೆ ಹಾಗೂ ನಾಡಿದ್ದು ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್‌ಐಆರ್‌ ಅವಧಿ ವಿಸ್ತರಣೆ ಕೋರಿ ಅರ್ಜಿ ವಿಚಾರಣೆಗೆ ಒಪ್ಪದ ಕೋರ್ಟ್‌! PIL ಅರ್ಜಿ ಸಲ್ಲಿಸಿದ್ದು ಯಾರು? ನ್ಯಾಯಾಲಯದ ತೀರ್ಪು ಏನು?
KPSC Scam: ಪಶು ವೈದ್ಯರ ನೇಮಕದಲ್ಲಿ 400 ಕೋಟಿ ಲಂಚ: ಬಿವೈ ವಿಜಯೇಂದ್ರ ಗಂಭೀರ ಆರೋಪ