ಬಿಜೆಪಿ ಕೈ ಹಿಡಿದ ಶಾಸಕ, ಜಿಪಂನಲ್ಲಿ ಅರಳಿದ ಕಮಲ

Published : Jun 24, 2019, 11:04 PM IST
ಬಿಜೆಪಿ ಕೈ ಹಿಡಿದ ಶಾಸಕ, ಜಿಪಂನಲ್ಲಿ ಅರಳಿದ ಕಮಲ

ಸಾರಾಂಶ

ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ರಾಜಕಾರಣದ ಬದಲಾವಣೆಗಳು ನಿರಂತರವಾಗಿದೆ.

ಕೋಲ್ಕತ್ತಾ[ಜೂ. 24]  ಬಿಜೆಪಿ ನಿಧಾನವಾಗಿ ಮಮತಾ ಬ್ಯಾನರ್ಜಿಯ ಭದ್ರಕೋಟೆ ಪಶ್ಚಿಮ ಬಂಗಾಳವನ್ನು ಆಕ್ರಮಿಸಿಕೊಳ್ಳುತ್ತಿದೆ. ಸೌತ್ ದಿನಾಜ್ ಪುರ್ ಜಿಲ್ಲಾ ಪರಿಷತ್ ಕಮಲದ ವಶವಾಗಿದೆ. ತೃಣಮೂಲ ಕಾಂಗ್ರೆಸ್ ನ ಪ್ರಮುಖ ನಾಯಕ ಬಿಪ್ ಲಾಬ್ ಮಿತ್ರಾ ಸಹ ಬಿಜೆಪಿ ಸೇರಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಟಿಎಂಸಿಯನ್ನು ಕಟ್ಟಿ ಬೆಳೆಸಿದ್ದವರಲ್ಲಿ ಮಿತ್ರಾ ಪ್ರಮುಖರು.  ಮಿತರಾ ಜತೆ 18 ಜನ ಸದಸ್ಯರು ಬಿಜೆಪಿ ಸೇರಿರುವುದು ಅಲ್ಲದೇ ಲಿಪುರ್ ದರ್ ಜಿಲ್ಲೆಯ ಕಲ್ಚಿನಿಯ  ಟಿಎಂಸಿಯ ಶಾಸಕ ವಿಲ್ಸನ್ ಚಾಂಪ್ರಮರಿ ಸಹ ಕಮಲದ ಕೈ ಹಿಡಿದಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ  ಟಿಎಂಸಿಯ ಅನೇಕ ಶಾಸಕರು ಬಿಜೆಪಿ ಜಾಯಿನ್ ಆಗಿದ್ದಾರೆ. ಇಡಿ ದೇಶದಲ್ಲಿ ಪಕ್ಷಾಂತಯರ ಪರ್ವ ನಡೆಯುತ್ತಿದ್ದು ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ