ಪ್ರತಿಷ್ಠೆಯ ಕಣವಾಗಿದೆ ವರುಣಾ: ಇಂದಿನಿಂದ ವಿಜಯೇಂದ್ರ ಪ್ರಚಾರ

By Suvarna Web DeskFirst Published Apr 8, 2018, 8:51 AM IST
Highlights

ಮಾಜಿ.ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಯತೀಂದ್ರ ವಿರುದ್ಧ ವರುಣಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು  ವರುಣಾ ಬಿಜೆಪಿ ಘಟಕದಲ್ಲಿ  ಕಾರ್ಯ ಚಟುವಟಿಕೆ ಗರಿಗದರಿದೆ. 

ಬೆಂಗಳೂರು (ಏ. 08):  ಮಾಜಿ.ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಯತೀಂದ್ರ ವಿರುದ್ಧ ವರುಣಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು  ವರುಣಾ ಬಿಜೆಪಿ ಘಟಕದಲ್ಲಿ  ಕಾರ್ಯ ಚಟುವಟಿಕೆ ಗರಿಗದರಿದೆ. 

ಮೈಸೂರಿನ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಮುಖಂಡರುಗಳ ಜೊತೆ  ಬಿಜೆಪಿ ಸಂಭಾವ್ಯ ಅಭ್ಯರ್ಥಿ ವಿಜಯೇಂದ್ರ ಸಭೆ ನಡೆಸಲಿದ್ದಾರೆ.  ವರುಣ ಕ್ಷೇತ್ರದ ಹದಿನಾರು, ಕವಲಂದೆ, ತಾಂಡವಪುರ, ವರುಣ ಸೇರಿದಂತೆ ಎಲ್ಲಾ ಕ್ಷೇತ್ರದ ಮುಖಂಡರುಗಳ ಸಭೆ ಕರೆದಿದ್ದಾರೆ ವಿಜಯೇಂದ್ರ. ಸಿಎಂ ಪುತ್ರ ಯತೀಂದ್ರ ವಿರುದ್ದ  ಕದನಕ್ಕೆ ವಿಜೇಯೇಂದ್ರ ಫುಲ್ ರೆಡಿಯಾಗಿದ್ದಾರೆ.  ಇಂದಿನಿಂದ ಎರಡು ದಿನಗಳ ಕಾಲ ಕ್ಷೇತ್ರ  ಪ್ರವಾಸ ಮಾಡಲಿದ್ದಾರೆ. 

click me!