ಭಂವರಿ ದೇವಿ ಸತ್ತಿಲ್ಲ, ಬೆಂಗಳೂರಿನಲ್ಲಿದ್ದಾಳೆ!: ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Published : Jun 11, 2017, 11:24 AM ISTUpdated : Apr 11, 2018, 12:48 PM IST
ಭಂವರಿ ದೇವಿ ಸತ್ತಿಲ್ಲ, ಬೆಂಗಳೂರಿನಲ್ಲಿದ್ದಾಳೆ!: ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸಾರಾಂಶ

ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನರ್ಸ್‌ ಭಂವರಿ ದೇವಿ ನಾಪತ್ತೆ ಮತ್ತು ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಭಂವರಿ ದೇವಿ ಸಾವನ್ನಪ್ಪಿಲ್ಲ. ಆಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಳೆ' ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದಿರಾ ಬಿಷ್ಣೋಯಿ ಕೋರ್ಟ್‌ಗೆ ತಿಳಿಸಿದ್ದಾಳೆ.

ಜೋಧಪುರ(ಜೂ.11): ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನರ್ಸ್‌ ಭಂವರಿ ದೇವಿ ನಾಪತ್ತೆ ಮತ್ತು ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಭಂವರಿ ದೇವಿ ಸಾವನ್ನಪ್ಪಿಲ್ಲ. ಆಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಳೆ' ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದಿರಾ ಬಿಷ್ಣೋಯಿ ಕೋರ್ಟ್‌ಗೆ ತಿಳಿಸಿದ್ದಾಳೆ.

ಜೂನ್‌ 3ರಂದು ಬಂಧನಕ್ಕೆ ಒಳಗಾದ ಇಂದಿರಾ ಬಿಷ್ಣೋಯಿ ಪರ ವಕೀಲರು ಕೋರ್ಟಿಗೆ ಈ ಮಾಹಿತಿ ನೀಡಿದ್ದಾರೆ. ‘ಕಾಲುವೆಯೊಂದರಿಂದ ಸಿಬಿಐ ವಶಪಡಿಸಿಕೊಂಡ ಮೂಳೆಗಳು ಭಂವರಿ ದೇವಿಯದ್ದಲ್ಲ. ವಿಧಿ ವಿಜ್ಞಾನ ಪರೀಕ್ಷೆಯ ವರದಿಯಲ್ಲಿ ಈ ಕುರಿತು ಸ್ಪಷ್ಟನೆ ಇಲ್ಲ. ಹೀಗಾಗಿ ಆಕೆ ಇನ್ನೂ ಬದುಕಿರಬಹುದು' ಎಂಬ ಬಿಷ್ಣೋಯಿ ಹೇಳಿಕೆಗೆ ವಕೀಲರು ಪೂರಕವಾಗಿ ವಾದ ಮಂಡಿಸಿದ್ದಾರೆ.

2011ರಲ್ಲಿ ಭಂವರಿದೇವಿ ಕೊಲೆ ಪ್ರಕರಣ ಹಾಗೂ ಪ್ರತಿಷ್ಠಿತ ರಾಜಕಾರಣಿಗಳ ಜತೆಗಿನ ಆಕೆಯ ಅನೈತಿಕ ಲೈಂಗಿಕ ಸಂಬಂಧ ಸುದ್ದಿಯಾಗಿತ್ತು. ಪ್ರಕರಣದಲ್ಲಿ ರಾಜಸ್ಥಾನ ಸಚಿವ ಮಹಿಪಾಲ ಮದೇರ್ಣಾ ಅವರ ಹೆಸರು ಕೇಳಿ ಬಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌