ಯೋಗಿಶ್ ಗೌಡ ಕೊಲೆ ಕೇಸಲ್ಲಿ ರೋಚಕ ಟ್ವಿಸ್ಟ್..! ವಿನಯ್ ಕುಲಕರ್ಣಿ ರಕ್ಷಣೆಗೆ ನಿಂತ ಮಲ್ಲಮ್ಮ

Published : Jan 23, 2018, 08:25 AM ISTUpdated : Apr 11, 2018, 12:36 PM IST
ಯೋಗಿಶ್  ಗೌಡ ಕೊಲೆ ಕೇಸಲ್ಲಿ ರೋಚಕ ಟ್ವಿಸ್ಟ್..! ವಿನಯ್ ಕುಲಕರ್ಣಿ ರಕ್ಷಣೆಗೆ ನಿಂತ ಮಲ್ಲಮ್ಮ

ಸಾರಾಂಶ

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​ ಗೌಡ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್  ಸಿಕ್ಕಿದೆ. ತನ್ನ ಗಂಡನ ಕೊಲೆಗೆ ನ್ಯಾಯ ಕೇಳಿದ್ದ ಮಲ್ಲಮ್ಮ ಅವರೇ ಇದೀಗ ಉಲ್ಟಾ ಹೊಡೆದಿದ್ದಾರೆ. ಕೋರ್ಟ್​​ಗೆ ಪ್ರಮಾಣಪತ್ರ ಸಲ್ಲಿಸಿದ್ದು, ವಿನಯ್​ ಕುಲಕರ್ಣಿ ಪರ ಬ್ಯಾಂಟಿಂಗ್​​ ಬೀಸಿದ್ದಾರೆ.

ಧಾರವಾಡ (ಜ.23): ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​ ಗೌಡ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್  ಸಿಕ್ಕಿದೆ. ತನ್ನ ಗಂಡನ ಕೊಲೆಗೆ ನ್ಯಾಯ ಕೇಳಿದ್ದ ಮಲ್ಲಮ್ಮ ಅವರೇ ಇದೀಗ ಉಲ್ಟಾ ಹೊಡೆದಿದ್ದಾರೆ. ಕೋರ್ಟ್​​ಗೆ ಪ್ರಮಾಣಪತ್ರ ಸಲ್ಲಿಸಿದ್ದು, ವಿನಯ್​ ಕುಲಕರ್ಣಿ ಪರ ಬ್ಯಾಂಟಿಂಗ್​​ ಬೀಸಿದ್ದಾರೆ.

ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​​ ಗೌಡ ಅವರ ಚಾರಿತ್ರ್ಯ ವಧೆಗೆ ಖುದ್ದು ಅವರ ಪತ್ನಿಯೇ ಮುಂದಾಗಿದ್ದಾರೆ. ಸಚಿವ ವಿನಯ್​ ಕುಲಕರ್ಣಿ ನನ್ನ ಗಂಡನನ್ನ ಕೊಲ್ಲಿಸಿದ್ದಾರೆ ಎಂದು ಬೊಬ್ಬಿರಿದಿದ್ದ ಮಲ್ಲಮ್ಮ, ಇದೀಗ ಆರೋಪಿತರ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಕರಣ ಸಿಬಿಐಗೆ ವಹಿಸುವಂತೆ ಯೋಗೀಶ್​​ ಗೌಡ ತಾಯಿ ತುಂಗಮ್ಮ ರಿಟ್​​ ಅರ್ಜಿ ಸಲ್ಲಿಸಿದ್ದರು.  ಈ ಸಂಬಂಧ ಧಾರವಾಡ ಹೈಕೋರ್ಟ್​ ಪೀಠಕ್ಕೆ ಮಲ್ಲಮ್ಮ ಪ್ರಮಾಣ ಪತ್ರ ಸಲ್ಲಿಸಿದ್ದು ತನ್ನನ್ನೂ ಪ್ರತಿವಾದಿಯಾಗಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಯೋಗಿಶ್​​ ಗೌಡ ಹಾಗೂ ವಿನಯ್​ ಕುಲಕರ್ಣಿ ಮಧ್ಯೆ ದ್ವೇಷವೇ ಇರಲಿಲ್ಲ..!

ವಿನಯ್​ ಕುಲಕರ್ಣಿ ವಿರುದ್ಧ ಇಂಗ್ಲೀಷ್​ನಲ್ಲಿ ದೂರು ಬರೆದು ನನ್ನ ಸಹಿ ಪಡೆದಿದ್ದಾರೆ. ಗುರುನಾಥ್​ ಗೌಡ ರಾಜಕೀಯ ಲಾಭಕ್ಕೆ ಕೊಲೆ ಕೇಸ್​ ಬಳಸಿಕೊಳ್ಳುತ್ತಿದ್ದಾರೆ. ಈ ಮಾತುಗಳನ್ನ ಹೇಳಿದ್ದು ಯೋಗೀಶ್​ಗೌಡ ಪತ್ನಿ  ಮಲ್ಲಮ್ಮ. ಹೈಕೋರ್ಟ್​​'ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿನಯ್​ ಕುಲಕರ್ಣಿ ವಿರುದ್ಧ ಇಂಗ್ಲೀಷ್​ನಲ್ಲಿ ದೂರು ಬರೆದುಕೊಂಡು ನನ್ನ ಬಳಿ ಸಹಿ ಮಾಡಿಸಿಕೊಂಡಿದ್ದಾರೆ. ನಾನು ಎಲ್ಲಿಯೂ ವಿನಯ್​​ ಕುಲಕರ್ಣಿ ಹಾಗೂ ಹೆಚ್ ಕೆ ಪಾಟೀಲ್​ ವಿರುದ್ಧ ಆರೋಪ ಮಾಡಿಲ್ಲ ಎಂದಿದ್ದಾರೆ. ಅದೆಲ್ಲಕ್ಕಿಂತ ಅಚ್ಚರಿ ಎಂದ್ರೆ,  ನನ್ನ ಗಂಡ ಯೋಗಿಶ್​ ಗೌಡರ ವಿರುದ್ಧ 27 ಹಾಗೂ ಭಾವ ಗುರುನಾಥ್​ ಗೌಡರ ವಿರುದ್ಧ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ. ನನ್ನ ಗಂಡನ ಹತ್ಯೆ ಕೇಸನ್ನು ರಾಜಕೀಯ ದ್ವೇಷ ಸಾಧನೆಗೆ ಗುರುನಾಥ್​ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ವಿನಯ್​ ಕುಲಕರ್ಣಿ ಕೊಲೆಯ ಮಾಸ್ಟರ್​ ಮೈಂಡ್​ ಎಂದು ನಾನು ಹೇಳಿಲ್ಲ..!

ಇನ್ನೂ ನಾನು ಯಾವಾಗಲೂ ವಿನಯ್​ ಕುಲಕರ್ಣಿ ಯೋಗಿಶ್​​ ಗೌಡ ಕೊಲೆ ಕೇಸಲ್ಲಿ ಮಾಸ್ಟರ್​ ಮೈಂಡ್​ ಎಂದು ಹೇಳಿಯೇ ಇಲ್ಲ ಎಂದೂ ಯೂಟರ್ನ್​ ಹೊಡೆದಿದ್ದಾರೆ. ಈ ಮೂಲಕ ಮಲ್ಲಮ್ಮ ಯೋಗೀಶ್ ​ಗೌಡ ಕೇಸ್​ಗೆ ಮೇಜರ್ ಟ್ವಿಸ್ಟ್ ಕೊಟ್ಟಿದ್ದಾರೆ.ಒಟ್ಟಿನಲ್ಲಿ ಮೂರು ವಾರಗಳ ಕಾಲ ನಾಪತ್ತೆಯಾಗಿದ್ದ ಮಲ್ಲಮ್ಮ ಪ್ರತ್ಯಕ್ಷವಾದಗಲೇ ಸಚಿವ ವಿನಯ್​ ಪರ ಬ್ಯಾಟಿಂಗ್​​ ಬೀಸಿದ್ದರು. ಇದೀಗ ಅಧಿಕೃತವಾಗಿ ಕೋರ್ಟ್​​ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೇ ಮಲ್ಲಮ್ಮ ಕುಟುಂಬದವರ ವಿರುದ್ಧವೇ ತಿರುಗಿ ನಿಂತಿದ್ದು ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಟಿ ಜನರ ಹೃದಯ ಮೀಟಿದ ಮಾನವ: ನಾನು ರಾಜಕೀಯಕ್ಕೆ ಬಂದಿದ್ದು ದೊಡ್ಡ ತಪ್ಪು ಎಂದಿದ್ದ ವಾಜಪೇಯಿ
'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!