
ಹಾಸನ(ಸೆ.01): ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಎ.ಕಾಳೇನಹಳ್ಳಿ ಯುವಕನ ಶಿರಚ್ಚೇದನ ಮಾಡಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆಗಸ್ಟ್ 28ರಂದು ಕಬ್ಬಿನಗದ್ದೆಯಲ್ಲಿ ನವಿನ್ ಎಂಬ ವ್ಯಕ್ತಿಯ ರುಂಡ-ಮುಂಡವನ್ನ ಅನಿಲ್ ಎಂಬುವನು ಬೇರ್ಪಡಿಸಿ ಮುಂಡವನ್ನ ಸ್ಥಳದಲ್ಲೇ ಬಿಟ್ಟು ರುಂಡವನ್ನ ತೆಗೆದುಕೊಂಡು ಹೋಗಿದ್ದ ಭಯಾನಕ ಘಟನೆಯೊಂದ್ದು ನಡೆದಿತ್ತು. ಇನ್ನು ಪ್ರಕರಣವನ್ನ ಬೆನ್ನಟಿದ್ದ ಪೊಲೀಸರಿಗೆ ನಿನ್ನೆ ಆರೋಪಿ ಅನಿಲ್ ಎಂಬುವನ್ನ ಸುಳಿವು ಸಿಕ್ಕಿದೆ, ಇದನ್ನ ಬೆನ್ನಟ್ಟಿ ಆರೋಪಿ ನವೀನ್'ನನ್ನು ಹಿಡಿಯಲು ಪೊಲೀಸರು ಬೆನ್ನಟ್ಟಿದ್ದಾಗ ಚನ್ನರಾಯಪಟ್ಟಣದ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ನವೀನ್ ಲಾರಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.
ಇನ್ನು ಈ ಎಲ್ಲಾ ಘಟನೆಗೆ ಅನಿಲ್ ಜೊತೆ ಎಂಗೇಜ್ ಮೆಂಟ್ ಆಗಿದ್ದ ಯುವತಿಗೆ ನವೀನ್ ಮೆಸೇಜ್ ಮಾಡುತ್ತಿದ್ದು, ಸಲುಗೆಯಿಂದ ವರ್ತಿಸುತ್ತಿದ್ದನಂತೆ. ಇದನ್ನು ಸಹಿಸಲಾಗದೆ ಅನಿಲ್, ನವೀನ್ ಶಿರಚ್ಚೇದನ ಮಾಡಿದ್ದ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.