
ಚೆನ್ನೈ(ಡಿ.08): ನೋಟ್ ಬ್ಯಾನ್ ಕಾಳಧನಿಕರ ಚಲನವಲನದ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚೆನ್ನೈನಲ್ಲಿ ಜುವೆಲ್ಲರಿ ಮಳಿಗೆಗಳು ಸೇರಿ 8 ಕಡೆ ದಾಳಿ ನಡೆಸಿದ್ದಾರೆ.
ಟಿ ನಗರ್, ಅಣ್ಣಾ ನಗರದ ಹಲವೆಡೆ ದಾಳಿ ನಡೆದಿದ್ದು, ದಾಳಿ ವೇಳೆ 90 ಕೋಟಿ ರೂಪಾಯಿಯನ್ನ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 10 ಕೋಟಿ ರೂಪಾಯಿಯಷ್ಟು ಹೊಸ ಸಾವಿರ ರೂಪಾಯಿಯ ನೋಟುಗಳೂ ಸೇರಿವೆ. ಜೊತೆಗೆ 30 ಕೋಟಿ ಮೌಲ್ಯದ 100 ಕೆ.ಜಿ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ.
ಒನ್ ಶ್ರೀನಿವಾಸ ರೆಡ್ಡಿ, ಸಹಚರ ಶೇಖರ್ ರೆಡ್ಡಿ, ಏಜೆಂಟ್ ಪ್ರೇಮ್ ಎಂಬುವವರಿಂದ ಹೋಟೆಲ್`ವೊಂದರಲ್ಲಿ 70 ಕೆ.ಜಿ ಗೋಲ್ಡ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.