
ಬೆಂಗಳೂರು: ಕಾನೂನು ಉಲ್ಲಂಘಿಸಿ ಏಕಮುಖ ರಸ್ತೆ ಯಲ್ಲಿ ವಾಹನ ಓಡಿಸಿದವರಿಗೆ ಶುಕ್ರವಾರ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದು, ಒಂದೇ ದಿನದಲ್ಲಿ 2763 ಪ್ರಕರಣ ದಾಖಲಿ ಸಿದ್ದಾರೆ. ಬೆಳಗ್ಗೆಯಿಂದಲೇ ಏಕ ಮುಖ ಸಂಚಾರ ಮಾರ್ಗದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಪೊಲೀಸರು, ನಿಯಮ ಮೀರಿ ವಾಹನ ಓಡಿಸಿದವರಿಗೆ ದಂಡ ಪ್ರಯೋಗ ಮಾಡಿದ್ದಾರೆ.
ಸಂಜೆ 5 ಗಂಟೆಗೆ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಶನಿವಾರ ಸಹ ಮುಂದುವರೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಪೂರ್ವ ವಲಯದ 1447 , ಪಶ್ಚಿಮ ವಿಭಾಗ 517, ಉತ್ತರ ವಿಭಾಗದ ವ್ಯಾಪ್ತಿ 799 ಪ್ರಕರಣ ದಾಖಲಿಸಿ ದ್ದಾರೆ.
ಏಕಮುಖ ಮಾರ್ಗದಲ್ಲಿ ಸಂಚಾರ ಶಿಸ್ತು ಜಾರಿಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.