
ಬೆಂಗಳೂರು[ಜು.12]: ಟೆಕ್ಕಿಯೊಬ್ಬ ಬಾಡಿಗೆ ಕಾರನ್ನು ಕದ್ದು ಪರಾರಿಯಾದ ಘಟನೆ ಅಶೋಕನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಆಂಧ್ರ ನಿವಾಸಿಯಾದ ಮಹೇಶ್ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಸಾಯಿಕುಮಾರ್ ಎಂಬಾತನ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ಬೆಂಗಳೂರಿನಲ್ಲಿ ಜೂಮ್ ಕಾರ್ ಬುಕ್ ಮಾಡಿದ್ದ. ಜೂಮ್ ಕಾರ್ ಸಿಗ್ತಿದ್ದಂತೆ ಕಾರ್ ತೆಗೆದುಕೊಂಡು ಕಾಕಿನಾಡ್ ಗೆ ಪರಾರಿಯಾಗಿದ್ದಾನೆ.
ದಾರಿ ಮಧ್ಯೆ ಕಾರಿನ ನಂಬರ್ ಪ್ಲೇಟನ್ನ ಬದಲಾಯಿಸಿ ಜಿಪಿಎಸ್ ಕಿತ್ತು ಹಾಕಿದ್ದಾನೆ. ಐಷರಾಮಿ ಜೀವನಕ್ಕಾಗಿ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[ಸಾಂದರ್ಭಿಕ ಚಿತ್ರ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.