ಪ್ರಧಾನಿ ಮೋದಿ, ಮಾಳಾವಿಕಗೆ ಸ್ಯಾನಿಟರಿ ಪ್ಯಾಡ್ ರವಾನಿಸಿದ ಬೆಂಗಳೂರು ವಿದ್ಯಾರ್ಥಿನಿಯರು

Published : Jul 14, 2017, 11:01 AM ISTUpdated : Apr 11, 2018, 12:47 PM IST
ಪ್ರಧಾನಿ ಮೋದಿ, ಮಾಳಾವಿಕಗೆ ಸ್ಯಾನಿಟರಿ ಪ್ಯಾಡ್ ರವಾನಿಸಿದ ಬೆಂಗಳೂರು ವಿದ್ಯಾರ್ಥಿನಿಯರು

ಸಾರಾಂಶ

ಸ್ಯಾನಿಟರಿ ಪ್ಯಾಡ್ ಮೇಲೆ ಭಾರಿ ತೆರಿಗೆ ವಿಧಿಸಿರುವ  ಕೇಂದ್ರ ಸರ್ಕಾರದ  ಕ್ರಮ ಖಂಡಿಸಿ ಎನ್’ಎಸ್’ಯುಐ ಹಾಗೂ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ಹಾಗೂ ರಾಜ್ಯ ಬಿಜೆಪಿ ವಕ್ತಾರೆ ಮಾಳಾವಿಕ ಅವರಿಗೆ ಅಂಚೆ ಮೂಲಕ ಸ್ಯಾನಿಟರಿ ಪ್ಯಾಡ್’ಗಳನ್ನು ಕಳುಹಿಸಿದ್ದಾರೆ.

ಬೆಂಗಳೂರು: ಸ್ಯಾನಿಟರಿ ಪ್ಯಾಡ್ ಮೇಲೆ ಭಾರಿ ತೆರಿಗೆ ವಿಧಿಸಿರುವ  ಕೇಂದ್ರ ಸರ್ಕಾರದ  ಕ್ರಮ ಖಂಡಿಸಿ ಎನ್’ಎಸ್’ಯುಐ ಹಾಗೂ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ಹಾಗೂ ರಾಜ್ಯ ಬಿಜೆಪಿ ವಕ್ತಾರೆ ಮಾಳಾವಿಕ ಅವರಿಗೆ ಅಂಚೆ ಮೂಲಕ ಸ್ಯಾನಿಟರಿ ಪ್ಯಾಡ್’ಗಳನ್ನು ಕಳುಹಿಸಿದ್ದಾರೆ.

ಜಿಎಸ್ಟಿ ಅಡಿ ಸ್ಯಾನಿಟರಿ ಪ್ಯಾಡ್’ಗೆ ಶೇ. 12 ತೆರಿಗೆ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ದೇಶಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜು ಬಳಿ ಎನ್’ಎಸ್’ಯುಐ ವಿದ್ಯಾರ್ಥಿನಿಯರ ಘಟಕವು ‘ಅಂಚೆ ಪ್ರತಿಭಟನೆ’ ನಡೆಸಿ ಆಕ್ರೊಶ ವ್ಯಕ್ತಪಡಿಸಿದೆ.

ಗುರುವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು, ಮಹಿಳೆಯರ ಮುಟ್ಟಿಗೆ ತೆರಿಗೆ ಹಾಕುವ ಮೂಲಕ ಕೇಂದ್ರ ಸರ್ಕಾರ ಕೀಳಾಗಿ ನಡೆದುಕೊಂಡಿದೆ. ಮಹಿಳೆಯರು ಪ್ರತಿ ತಿಂಗಳು ಅನುಭವಿಸುತ್ತಿದ್ದ ಕಿರುಕುಳಕ್ಕೆ ವರವಾಗಿ ಸ್ಯಾನಿಟರಿ ಪ್ಯಾಡ್ ಬಂದಿದೆ. ದೇಶದ ಅರ್ಧದಷ್ಟು ಜನಸಂಖ್ಯೆಗೆ ನ್ಯಾಪ್’ಕಿನ್ ಬೇಕು. ಆದರೆ, ಸ್ಯಾನಿಟರಿ ಪ್ಯಾಡ್ ದುಬಾರಿಯಿಂದಾಗಿ ಶೇ. 70 ಮಂದಿಗೆ ಪ್ಯಾಡ್ ಖರೀದಿಸಲೂ ಸಾಧ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶೇ. 12 ತೆರಿಗೆ ಹಾಕುವ ಮೂಲಕ ಮತ್ತಷ್ಟು ತುಟ್ಟಿ ಮಾಡಿ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಕೂಡಲೇ ಸ್ಯಾನಿಟರಿ ಪ್ಯಾಡ್ ಮೇಲಿನ ತೆರಿಗೆ ಹಿಂಪಡೆಯಬೇಕೆಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!