
ಮಂಗಳೂರು: ಬೆಂಗಳೂರಿನ ವಿದ್ಯಾರ್ಥಿಯೋರ್ವ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ದೊರಕಿದೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಬೆಳ್ತಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಬ್ಲೂ ವೇಲ್ ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಬ್ಲೂ ವೇಲ್ ಟಾಸ್ಕ್ ಪೂರೈಸುವ ಸಲುವಾಗಿ ವಿದ್ಯಾರ್ಥಿ ಬೆಂಗಳೂರಿನಿಂದ ಉಡುಪಿಗೆ ಹೊಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಆತನ ಡೈರಿಯ ಬರಹವೂ ಕೂಡ ಶಂಕೆ ಮೂಡಿಸಿದೆ.
ಡೈರಿಯಲ್ಲಿ ಜುಲೈ 24, 2018 ರಂದು ಉಡುಪಿಗೆ ಹೋಗುತ್ತೇನೆ. 5 ತಿಂಗಳು ಅಲ್ಲಿ ಕೆಲಸ ಮಾಡಬೇಕು ಎಂದು ಜನವರಿ 01, 2018 ರಲ್ಲಿ ವಿದ್ಯಾರ್ಥಿ ಯಶವಂತ್ ಡೈರಿಯಲ್ಲಿ ಬರೆದಿದ್ದ.
ಬೆಳ್ತಂಗಡಿಯ ಗುರುವಾಯನಕೆರೆ ಗ್ರಾಮದ ಕೆರೆಯಲ್ಲಿ ಯಶವಂತ್ ಸಾಯಿ ಶವ ಪತ್ತೆಯಾಗಿದ್ದು, ಶಾಲೆಗೆ ಹೋದವನು ಮನೆಗೆ ವಾಪಸಾಗದೇ ಅಲ್ಲಿದಂಲೇ ಉಡುಪಿಗೆ ತೆರಳಿದ್ದನೆನ್ನಲಾಗಿದೆ.
ದೂರವಾಣಿನಗರದ ಐಟಿಐ ವಿದ್ಯಾಮಂದಿರ್ ಶಾಲೆಯಲ್ಲಿ ಓದುತ್ತಿದ್ದ ಯಶವಂತ್ ಸ್ಕೂಲ್ ಬ್ಯಾಗ್ ಕರೆಯ ಬಳಿಯಲ್ಲಿ ದೊರಕಿದ್ದು, ಮನೆಯಲ್ಲಿ ತಾವು ಅಡ್ವೆಂಚರ್ ಟ್ರಿಪ್ ಗೆ ಹೋಗುವುದಾಗಿ ಚೀಟಿಯಲ್ಲಿ ಬರೆದಿಟ್ಟಿದ್ದನೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.