
ಬೆಂಗಳೂರು: ಕ್ರೈಂ ಆಗಿದೆ. ಪೊಲೀಸರಿಗೆ ಹೇಳ್ಬೇಕು. ಆದರೆ ಆ ಸ್ಥಳ ಯಾವ ಠಾಣಾ ಸರಹದ್ದಿಗೆ ಬರುತ್ತದೆ. ಆ ಠಾಣೆ ಎಲ್ಲಿದೆ ಎಂಬುದೇ ಗೊತ್ತಿಲ್ಲ..! ಪೊಲೀಸರ ವಿಚಾರದಲ್ಲಿ ನಾಗರಿಕರಿಗೆ ಎದುರಾಗುವ ಇಂತಹ ‘ತಲೆಬಿಸಿ'ಗೆ ಪೂರ್ಣ ವಿರಾಮ ಹಾಕಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.
ಈಗಾಗಲೇ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ರಕ್ಷಣೆಗೆ ‘ಹೈಟೆಕ್ ಸೇವೆ' ಕಲ್ಪಿಸಿರುವ ಪೊಲೀಸರು, ಈಗ ಠಾಣಾ ಸರಹದ್ದಿನ ಕುರಿತು ಮಾಹಿತಿ ನೀಡಲು ಪ್ರತ್ಯೇಕ ‘ಆ್ಯಪ್' ಸೇವೆಗೆ ನಿರ್ಧರಿಸಿದ್ದಾರೆ. ಇದರಿಂದ ತಮ್ಮ ಏರಿಯಾದ ಪೊಲೀಸರ ಕುರಿತು ಬೆರಳ ತುದಿಯಲ್ಲಿ ನಾಗರಿಕರಿಗೆ ಮಾಹಿತಿ ಸಿಗಲಿದೆ. ಅಲ್ಲದೆ ತಮ್ಮ ಠಾಣಾ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪೊಲೀಸರ ಸಬೂಬು ಮಾತುಗಳಿಗೂ ಬ್ರೇಕ್ ಬೀಳಲಿದೆ.
ಮಾಸಾಂತ್ಯಕ್ಕೆ ಆ್ಯಪ್ ಬಿಡುಗಡೆ: ಜನರಿಗೆ ಠಾಣೆಗಳ ಸರಹದ್ದು ಕುರಿತು ಮಾಹಿತಿ ನೀಡಲು ‘Know Jurisdiction ' ಆ್ಯಪ್ ಸಿದ್ಧಪಡಿಸಲಾಗಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಕಮಾಂಡೋ ಸೆಂಟರ್ ಡಿಸಿಪಿ ನಾಗೇಂದ್ರ ಕುಮಾರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.