ಬೆಂಗಳೂರು ಕರಗ ಮಾರ್ಗ ಬದಲಾವಣೆ ಸಾಧ್ಯತೆ

By Suvarna Web DeskFirst Published Mar 29, 2018, 9:18 AM IST
Highlights

ಐತಿಹಾಸಿಕ ಬೆಂಗಳೂರು ಕರಗ ಉತ್ಸವದಲ್ಲಿ  ಕರಗ ಮಾರ್ಗ ಬದಲಾವಣೆ ಮಾಡುವ ಸಾಧ್ಯತೆ ಇದೆ.  ಕರಗ ಸಾಗುವ ಅವೆನ್ಯೂ  ರಸ್ತೆಯಲ್ಲಿ  ಜಲ ಮಂಡಳಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ  ಮಾರ್ಚ್ 31 ರೊಳಗೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.  ಹೀಗಾಗಿ ಬೆಂಗಳೂರು ಕರಗ ಮಾರ್ಗ ಬದಲಾವಣೆ ಮಾಡುವ ಸಾಧ್ಯತೆ ಇದೆ. 

ಬೆಂಗಳೂರು (ಮಾ. 29): ಐತಿಹಾಸಿಕ ಬೆಂಗಳೂರು ಕರಗ ಉತ್ಸವದಲ್ಲಿ  ಕರಗ ಮಾರ್ಗ ಬದಲಾವಣೆ ಮಾಡುವ ಸಾಧ್ಯತೆ ಇದೆ.  ಕರಗ ಸಾಗುವ ಅವೆನ್ಯೂ  ರಸ್ತೆಯಲ್ಲಿ  ಜಲ ಮಂಡಳಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ  ಮಾರ್ಚ್ 31 ರೊಳಗೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.  ಹೀಗಾಗಿ ಬೆಂಗಳೂರು ಕರಗ ಮಾರ್ಗ ಬದಲಾವಣೆ ಮಾಡುವ ಸಾಧ್ಯತೆ ಇದೆ. 

ಪ್ರತಿ ವರ್ಷ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಹಲಸೂರು ಪೇಟೆ, ಆಂಜನೇಯಸ್ವಾಮಿ , ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ,  ಕಬ್ಬನ್ ಪೇಟೆ ರಾಮಸೇವಾ ಮಂದಿರ ಇನ್ನಿತರ ಕಡೆ ಪೂಜೆ ಸಲ್ಲಿಸಿ ಪುನಃ ಧರ್ಮರಾಯ ದೇವಸ್ಥಾನಕ್ಕೆ ತಲುಪುತ್ತಿತ್ತು.  ಆದರೆ ಕರಗ ಸಾಗುವ ಅವೆನ್ಯೂ  ರಸ್ತೆ ಅಗೆದು ಹಾಕಲಾಗಿದೆ.   ಕಾಮಗಾರಿ ಪೂರ್ಣಗೊಳ್ಳದಿದ್ದರೆ,  ಮಾರ್ಗ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 
 

click me!