ಅಭಿಗೆ ಮತ್ತೆ ವಿಮಾನ ನೀಡಬೇಕಾ? ಬೆಂಗಳೂರಲ್ಲಿ ನಿರ್ಧಾರ

Published : Mar 04, 2019, 09:03 AM IST
ಅಭಿಗೆ ಮತ್ತೆ ವಿಮಾನ ನೀಡಬೇಕಾ? ಬೆಂಗಳೂರಲ್ಲಿ ನಿರ್ಧಾರ

ಸಾರಾಂಶ

ಅಭಿಗೆ ಮತ್ತೆ ವಿಮಾನ ಬೆಂಗಳೂರಲ್ಲಿ ನಿರ್ಧಾರ| ವೈದ್ಯಕೀಯ ವರದಿಯ ಮೇಲೆ ನಿರ್ಧಾರ

ನವದೆಹಲಿ[ಮಾ.04]: ಪಾಕಿಸ್ತಾನದ ವಶದಿಂದ ಬಿಡುಗಡೆ ಹೊಂದಿದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಮತ್ತೆ ಯುದ್ಧವಿಮಾನ ಹಾರಿಸುವವರೇ ಎಂಬುದು ವೈದ್ಯಕೀಯ ಪರೀಕ್ಷಾ ವರದಿಯ ಮೇಲೆ ನಿರ್ಧಾರವಾಗಲಿದೆ.

ಅಭಿನಂದನ್‌ ಅವರನ್ನು ಶೀಘ್ರ ಬೆಂಗಳೂರಿನ ಏರೋಸ್ಪೇಸ್‌ ಮೆಡಿಸಿನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ತಪಾಸಣೆಗೆ ಒಳಪಡಿಸುವ ನಿರೀಕ್ಷೆಯಿದೆ. ಅಪಘಾತಕ್ಕೆ ಒಳಗಾದ ಪೈಲಟ್‌ಗಳನ್ನು ಇಲ್ಲಿ ದೇಹಕ್ಷಮತೆ ಪರೀಕ್ಷೆಗೆ ಒಳಪಡಿಸುವುದು ವಾಯುಪಡೆ ನಿಯಮದ ಅನುಸಾರ ಕಡ್ಡಾಯವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಒಮ್ಮೆ ವಿಮಾನದಿಂದ ಜಿಗಿದಾಗ ಜಿಗಿದ ಸಂದರ್ಭದಲ್ಲಿ ಬೆನ್ನುಹುರಿಯ ಮೇಲೆ ಶೇ.16-17ರಷ್ಟುಹೆಚ್ಚು ಭಾರ ಬೀಳುತ್ತದೆ. ಹೀಗಾಗಿ ಈ ನೋವು ನಿವಾರಣೆ ಆಗಲು ಸಮಯ ಹಿಡಿಯುತ್ತದೆ. ಒಮ್ಮೆ ನೋವು ನಿವಾರಣೆ ಆದರೆ ಬಳಿಕ ಅವರನ್ನು ಹೆಲಿಕಾಪ್ಟರ್‌ ಅಥವಾ ಸಾರಿಗೆ ವಿಮಾನಗಳನ್ನು ಚಲಾಯಿಸಲು ಅವಕಾಶ ನೀಡಲಾಗುತ್ತದೆ’ ಎಂದರು.

ಆದರೆ ಗಾಯ ಪೂರ್ತಿ ವಾಸಿಯಾದರೆ ಮಾತ್ರ ಅವರಿಗೆ ಯುದ್ಧವಿಮಾನ ಹಾರಿಸಲು ಅನುಮತಿಸಲಾಗುತ್ತದೆ ಎಂದೂ ಅವರು ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?