ಕುಡಿದು ಕಾರು ಚಲಾಯಿಸಿ ಅಪಘಾತ

Published : May 06, 2018, 07:20 AM ISTUpdated : May 06, 2018, 07:22 AM IST
ಕುಡಿದು ಕಾರು ಚಲಾಯಿಸಿ ಅಪಘಾತ

ಸಾರಾಂಶ

ಕುಡಿದು ಒನ್​ವೇನಲ್ಲಿ ಕಾರು ಚಲಾಯಿಸಿದ್ದರಿಂದ  ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಹನುಮಂತನಗರದ ನಿರ್ಮಲಾ ಸ್ಟೋರ್ಸ್​​ ಬಳಿ ನಡೆದಿದೆ.

ಬೆಂಗಳೂರು : ಕುಡಿದು ಒನ್​ವೇನಲ್ಲಿ ಕಾರು ಚಲಾಯಿಸಿದ್ದರಿಂದ  ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಹನುಮಂತನಗರದ ನಿರ್ಮಲಾ ಸ್ಟೋರ್ಸ್​​ ಬಳಿ ನಡೆದಿದೆ.

ಡಿಕ್ಕಿಯಾದ ರಭಸಕ್ಕೆ ಒಂದು ಸ್ವಿಫ್ಟ್​ ಡಿಸೈರ್​ ಕಾರು ಮತ್ತೊಂದು ಗೂಡ್ಸ್​  ಗಾಡಿ ಜಖಂ ಆಗಿವೆ. ಚಾಲಕ ಅಭಿಷೇಕ್ ಎಂಬಾತ ತಡರಾತ್ರಿ 1 ಗಂಟೆ ಹೊತ್ತಿಗೆ ಕುಡಿದು ತನ್ನ ಇನ್ನೋವಾ ಕಾರಿನಲ್ಲಿ ಹನುಮಂತನಗರದಿಂದ ನಿರ್ಮಲ ಸ್ಟೋರ್ಸ್ ಕಡೆಗೆ ಒನ್​ವೇನಲ್ಲಿ ವೇಗವಾಗಿ ಬಂದಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಡಿಸೈರ್​ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ನಂತರ ಮತ್ತೊಂದು ಗೂಡ್ಸ್ ಆಟೋಗೂ ಡಿಕ್ಕಿ ಹೊಡೆಸಿ ಬಳಿಕ ರಸ್ತೆ ಬದಿಯ ಕಾಂಪೌಂಡ್ ಒಂದಕ್ಕೆ ಗುದ್ದಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಘಟನೆ ನಡೆದ ಬಳಿಕ ಸ್ಥಳೀಯರು ಇನ್ನೋವಾ ಚಾಲಕ ಅಭಿಷೇಕ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಸ್ವಿಫ್ಟ್​ ಡಿಸೈರ್ ವಾಹನದಲ್ಲಿದ್ದ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ