
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಹತ್ತು ದಿನಗಳ ಚಳಿಗಾಲದ ಅಧಿವೇಶನಕ್ಕೆ ಇಂದು ತೆರೆ ಎಳೆಯಲಾಯಿತು. ನವೆಂಬರ್ 21 ರಿಂದ ಆರಂಭವಾಗಿದ್ದ ಅಧಿವೇಶನದಲ್ಲಿ ಆರಂಭದಿಂದಲೂ ಸುಗಮ ಕಲಾಪ ನಡೆದಿರುವುದು ಈ ವರ್ಷದ ವಿಶೇಷ. ಹತ್ತು ದಿನಗಳಲ್ಲಿ ಒಟ್ಟು 50 ಗಂಟೆ ಚರ್ಚೆ ನಡೆದಿದೆ. 15 ವಿಧೇಯಕಗಳು ಮಂಡನೆಯಾಗಿದ್ದು, 13 ವಿಧೇಯಕಳು ಅಂಗೀಕಾರವಾಗಿದೆ. ಮಹದಾಯಿ ವಿವಾದದ ಕುರಿತು 11 ಗಂಟೆ 37 ನಿಮಿಷ ಚರ್ಚೆ, ಬರಗಾಲ ಪರಿಸ್ಥಿತಿಯ ಕುರಿತು 11 ಗಂಟೆ 34 ನಿಮಿಷ ಚರ್ಚೆ ನಡೆಸಲಾಗಿದೆ. ಹತ್ತು ದಿನಗಳ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಅವರ ರಾಜಿನಾಮೆಗೆ ಆಗ್ರಹಿಸಿ ಧರಣಿ ನಡೆಸಿರುವ ಹೊರತುಪಡಿಸಿದರೆ ಈ ಅಧಿವೇಶನದಲ್ಲಿ ಧರಣಿ ಸಭಾತ್ಯಾಗ ನಡೆದಿದ್ದು ಕಡಿಮೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.