ದಶಕಗಳ ಬಳಿಕ ಕನ್ನಡಿಗರ ಕೈಗೆ ಬೆಳಗಾವಿ ಪಾಲಿಕೆ

Published : Feb 12, 2018, 08:54 AM ISTUpdated : Apr 11, 2018, 01:06 PM IST
ದಶಕಗಳ ಬಳಿಕ ಕನ್ನಡಿಗರ ಕೈಗೆ  ಬೆಳಗಾವಿ ಪಾಲಿಕೆ

ಸಾರಾಂಶ

ದಶಕಗಳ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ  ಕನ್ನಡಿಗರ ಮೇಲುಗೈ ಆಗಲಿದೆ. ರಾಜ್ಯ ಸರ್ಕಾರ ಉರುಳಿಸಿದ ಮೀಸಲಾತಿ ಅಸ್ತ್ರ ನಾಡದ್ರೋಹಿಗಳ ನಿದ್ದೆಗೆಡಿಸಿದೆ. ಈ ಭಾರಿ ನಾಡದ್ರೋಹಿಗಳು ಏನೇ ತಿಪ್ಪರಲಾಗಾ ಹಾಕಿದ್ರೂ ಬೆಳಗಾವಿ ಪಾಲಿಕೆ  ಮೇಯರ್ ಮಾತ್ರ ಕನ್ನಡಿಗರೇ ಆಗಲಿದ್ದಾರೆ.

ಬೆಂಗಳೂರು (ಫೆ.12): ದಶಕಗಳ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ  ಕನ್ನಡಿಗರ ಮೇಲುಗೈ ಆಗಲಿದೆ. ರಾಜ್ಯ ಸರ್ಕಾರ ಉರುಳಿಸಿದ ಮೀಸಲಾತಿ ಅಸ್ತ್ರ ನಾಡದ್ರೋಹಿಗಳ ನಿದ್ದೆಗೆಡಿಸಿದೆ. ಈ ಭಾರಿ ನಾಡದ್ರೋಹಿಗಳು ಏನೇ ತಿಪ್ಪರಲಾಗಾ ಹಾಕಿದ್ರೂ ಬೆಳಗಾವಿ ಪಾಲಿಕೆ  ಮೇಯರ್ ಮಾತ್ರ ಕನ್ನಡಿಗರೇ ಆಗಲಿದ್ದಾರೆ.

ನಾಡ ದ್ರೋಹಿಗಳಿಗೆ ಬಿಸಿ ತುಪ್ಪವಾಯ್ತು ಮೀಸಲಾತಿ ದಾಳ
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಅವಧಿ ತಿಂಗಳ ಕೊನೆಗೆ ಮುಗಿಯಲಿದ್ದು, ಇದೇ ತಿಂಗಳ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ  ಚುನಾವಣೆಗೆ  ನಡೆಯಲಿದೆ. ಸರ್ಕಾರ ಮೇಯರ್ ಹುದ್ದೆಯನ್ನ ಎಸ್.ಟಿ ವರ್ಗಕ್ಕೆ  ಮತ್ತು ಉಪಮೇಯರ್ ಹುದ್ದೆಯನ್ನ ಹಿಂದುಳಿದ ಮಹಿಳೆಗೆ ಎಂದು ಮಿಸಲಾತಿ ಪ್ರಕಟಿಸಿದೆ. ಈ ಬಾರಿ ಎಸ್.ಟಿ ವರ್ಗಕ್ಕೆ ಸೇರಿದ ನಗರ ಸೇವಕರು ಎಂಇಎಸ್ ಗುಂಪಿನಲ್ಲಿ ಇಲ್ಲವೇ ಇಲ್ಲ. ಹೀಗಾಗಿ  ಯಾವುದೇ ಕಸರತ್ತು ಇಲ್ಲದೇ ತಾನಾಗಿಯೇ ಕನ್ನಡಿಗರ ಪಾಲಿಗೆ ಮೇಯರ್ ಪಟ್ಟ ಒಲಿದು ಬರಲಿದೆ.

ಕಳೆದ ನಾಲ್ಕುಅವಧಿಗೂ ನಾಡದ್ರೋಹಿಗಳೇ ಮೇಯರ್, ಉಪಮೇಯರ್ ಆಗಿದ್ದರು. ಈಗ  ಕನ್ನಡಿಗರ ಗುಂಪಿನಲ್ಲಿ ಇರುವ ಬಸಪ್ಪ ಚಿಕ್ಕಲದಿನ್ನಿ ಹಾಗೂ ಸಂಜೋತಾ ಗಂಡಗುದರಿ ಅವರಿಗೆ ಮೇಯರ್ ಆಗುವ ಅವಕಾಶವಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸರ್ಕಾರದ ಮೇಲೆ ಒತ್ತಡ ಹಾಕಿ ಎಸ್ಟಿ ಮೀಸಲಾತಿಬರುವಂತೆ ಪ್ರಭಾವ ಬೀರಿದ್ದು, ಇದು ಎಂಇಎಸ್ ಸದಸ್ಯರಿಗೆ ಸಹಜವಾಗಿಯೇ ಶಾಕ್ ನೀಡಿದೆ.  ಇನ್ನು ಜನ ಪ್ರತಿನಿಧಿಗಳು ತೊಡೆ ತಟ್ಟಿ ನಿಂತರೆ ಉಪಮೇಯರ್ ಸ್ಥಾನ ಕೂಡ ಕನ್ನಡಿಗರ ಪಾಲಾಗಲಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್
ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ