ಎಂಜಿನಿಯರಿಂಗ್‌ ವಿದ್ಯಾರ್ಥಿನಿ ದಾಖಲೆ, ಹಣ ನೀರುಪಾಲು

Published : Aug 20, 2019, 10:16 AM ISTUpdated : Aug 20, 2019, 12:29 PM IST
ಎಂಜಿನಿಯರಿಂಗ್‌ ವಿದ್ಯಾರ್ಥಿನಿ  ದಾಖಲೆ, ಹಣ ನೀರುಪಾಲು

ಸಾರಾಂಶ

ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು, ಕಾಲೇಜು ಶುಲ್ಕಕ್ಕಾಗಿ ಆಕೆಯ ತಂದೆ ತೆಗೆದಿಟ್ಟಿದ್ದ .1 ಲಕ್ಷ ಕಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ (ಆ. 20): ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು, ಕಾಲೇಜು ಶುಲ್ಕಕ್ಕಾಗಿ ಆಕೆಯ ತಂದೆ ತೆಗೆದಿಟ್ಟಿದ್ದ .1 ಲಕ್ಷ ಕಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ನಡೆದಿದೆ.

'ಮಹಾ' ಪ್ರವಾಹಕ್ಕೆ ನಲುಗಿದ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿದ ಮುಸಲ್ಮಾನರು!

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಕಾಲೇಜೊಂದರಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ.ಬಸವರಾಜ ಕಾಂಬಳೆ (ನಾಗನೂರು) ಅವರ ಪಿಕೆ ಗ್ರಾಮದಲ್ಲಿರುವ ಮನೆ ಪ್ರವಾಹಕ್ಕೆ ಕುಸಿದಿದೆ. ಜೊತೆಗೆ ಅವರ ಪುತ್ರಿ ಝಾನ್ಸಿರಾಣಿ ಕಾಂಬಳೆ (ನಾಗನೂರು) ಎಂಬ ವಿದ್ಯಾರ್ಥಿನಿಯ ಕೆಲವು ಪ್ರಮಾಣ ಪತ್ರಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

ಝಾನ್ಸಿರಾಣಿ ಸರ್ಕಾರಿ ಕೋಟಾದಲ್ಲಿ ಚಿಕ್ಕೋಡಿಯಲ್ಲಿರುವ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿಎಸ್‌ (ಕಂಪ್ಯೂಟರ್‌ ವಿಜ್ಞಾನ) ನಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ. ಇದಕ್ಕಾಗಿ ಅವರ ತಂದೆ ಪ್ರೊ.ಬಸವರಾಜ ಅವರು .20 ಸಾವಿರ ಹಣ ತುಂಬಿದ್ದಾರೆ.

ಶಾಸಕ - ಜಿಲ್ಲಾಡಳಿತದ ಶ್ರಮ : ಮೂರೇ ದಿನದಲ್ಲಿ ಕೊಚ್ಚಿ ಹೋದ ಸೇತುವೆ ನಿರ್ಮಾಣ

ಇನ್ನುಳಿದ ಹಣ, ಹಾಸ್ಟೆಲ್‌ ಶುಲ್ಕ ತುಂಬಲೆಂದು .1 ಲಕ್ಷ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಆದರೆ, ಕೃಷ್ಣಾ ನದಿಗೆ ಪ್ರವಾಹ ಬಂದಿದ್ದರಿಂದ ಮನೆಯಲ್ಲಿಯೇ ಎಲ್ಲವನ್ನು ಬಿಟ್ಟು ಪರಿಹಾರ ಕೇಂದ್ರಗಳತ್ತ ತೆರಳಿದ್ದರು.

ನೆರೆ ಇಳಿದ ಮೇಲೆ ವಾಪಸ್‌ ಬಂದು ನೋಡಿದರೆ, ಮನೆ ಬಿದ್ದುಹೋಗಿದೆ. ಮನೆಯಲ್ಲಿಟ್ಟಿದ್ದ ಅಂದಾಜು 70 ರಿಂದ 80 ಸಾವಿರ ಮೌಲ್ಯದ ಪುಸ್ತಕಗಳು, ಪುತ್ರಿಯ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿ, ಕಾಲೇಜು ಶುಲ್ಕ ಕಟ್ಟಲು, ಹಾಸ್ಟೆಲ್‌ ಪ್ರವೇಶಕ್ಕೆಂದು ಇಟ್ಟಿದ್ದ .1 ಲಕ್ಷ ಹಣ ಕೂಡ ಕೊಚ್ಚಿಕೊಂಡು ಹೋಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!