ಮುಂದಿನ ರಾಜಕೀಯ ನಡೆ ಬಗ್ಗೆ ಬಿ.ಸಿ.ಪಾಟೀಲ್ ನಿಗೂಢ ಹೇಳಿಕೆ

By Web DeskFirst Published May 13, 2019, 3:08 PM IST
Highlights

ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಮುಂದಿನ ರಾಜಕೀಯ ನಡೆಯ ಬಗ್ಗೆ ನಿಗೂಢವಾಗಿ ಮಾತನಾಡಿದ್ದಾರೆ.

ಹಾವೇರಿ : ನನ್ನನ್ನು ಪಕ್ಷದಲ್ಲಿ ತುಳಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ರಾಜಕೀಯದಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಿ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ. 

"

ಜಿಲ್ಲೆಯಲ್ಲಿ ಶಾಸಕನಾಗಿ ಒಬ್ಬನೇ ಇದ್ದು, ಸಚಿವ ಸ್ಥಾನ ನೀಡಿದರೆ ಮೇಲೆ ಬರುತ್ತೇನೆ ಎಂದು ಕೆಳಕ್ಕೆ ತಳ್ಳುವ ಯತ್ನ ನಡೆಯುತ್ತಿದೆ.  ಕಾಂಗ್ರೆಸಿನವರೇ ಈ ರೀತಿ ಮಾಡುತ್ತಿದ್ದು, ಇದರಿಂದ ನನಗೆ ನೋವಾಗುತ್ತಿದೆ. ಎಲ್ಲೋ ಒಂದು ಕಡೆ ನನ್ನನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಕೂಡಿ ಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. 

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಬಗ್ಗೆ ಈಗಾಗಲೇ ಹಲವು ನಾಯಕರು ವಿವಿಧ ರೀತಿಯ ಹೇಳಿಕೆ ನೀಡುತ್ತಿದ್ದು, ಈ ಸಂಬಂಧ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್,  ಅವರು ಮುಖ್ಯಮಂತ್ರಿ ಆಗುತ್ತಾರೆ. ಅದು ಯಾವಾಗ ಎನ್ನುವುದನ್ನು ಕಾಲ ನಿರ್ಧರಿಸುತ್ತದೆ ಎಂದರು. 

ಅಲ್ಲದೇ ವಿಶ್ವನಾಥ್ ಹೇಳಿಕೆ ಬಗ್ಗೆಯೂ ಮಾತನಾಡಿ, ಅವರು  ಹಿರಿಯರು ಅವರು ಆ ರೀತಿಯ ಹೇಳಿಕೆ ನೀಡುವುದು ತಪ್ಪು.  ಗಂಡಾ ಹೆಂಡತಿ ಸಂಸಾರ ಮಾಡುತ್ತಿರುವಾಗ ಸಂಸಾರದ ಗುಟ್ಟನ್ನ ಇನ್ನೊಬ್ಬರ ಮುಂದೆ ಹೇಳಬಾರದು, ಸದ್ಯ ಆ ಪರಿಸ್ಥಿತಿ ಇಲ್ಲ. ನಮ್ಮ ನಾಯಕರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಬೇಕು ಎಂದು ಹೇಳ್ತಿವಿ.ಅದರಲ್ಲಿ ತಪ್ಪೇನಿದೆ. ಅವರ ಹೇಳಿಕೆ ಕೇಳಿದರೆ ಬೇಜಾರಾಗುತ್ತದೆ.  ಅಸಹ್ಯ ಅನಿಸುತ್ತದೆ ಎಂದರು. 

click me!