ಬಿಜೆಪಿ ಸಹೋದರನೊಂದಿಗೆ ಕಾಂಗ್ರೆಸ್ ಅತೃಪ್ತ ನಾಯಕ ; ಅಸಮಾಧಾನ

Published : May 13, 2019, 01:06 PM IST
ಬಿಜೆಪಿ ಸಹೋದರನೊಂದಿಗೆ ಕಾಂಗ್ರೆಸ್ ಅತೃಪ್ತ ನಾಯಕ ; ಅಸಮಾಧಾನ

ಸಾರಾಂಶ

ಕಾಂಗ್ರೆಸ್ ನಿಂದ ಅತೃಪ್ತಿ ಹೊಂದಿದ ನಾಯಕರೋರ್ವರು ಇದೀಗ ಬಿಜೆಪಿಯಲ್ಲಿರುವ ಸಹೋದರನೊಂದಿಗೆ ಸೇರಿದ್ದಾರೆ. ಇದರಿಂದ ಮತ್ತೋರ್ವ ಸಹೋದರ ಈ ಬಗ್ಗೆ ಟಾಂಗ್ ನೀಡಿದ್ದಾರೆ. 

ಬೆಳಗಾವಿ : ಕಾಂಗ್ರೆಸ್ ಅತೃಪ್ತ ನಾಯಕ  ರಮೇಶ್ ಜಾರಕಿ ಹೊಳಿ ಅವರ ಬಳಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಹೋದರ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. 

ರಮೇಶ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದಲ್ಲಿ ನಾವು ಸುಮ್ಮನಿರಬೇಕಾ?  ನಮ್ಮ ಪಕ್ಷವಾದ ಕಾಂಗ್ರೆಸ್ ಬಲಪಡಿಸುತ್ತೇವೆ. ನಮ್ಮ ಸಹೋದರರ ನಡುವೆ ಯಾರೂ ಹುಳಿ ಹಿಂಡುತ್ತಿಲ್ಲ. ಪಕ್ಷವೇ ಬೇರೆ ಸಂಬಂಧವೇ ಬೇರೆ ಎಂದರು. 

ಇನ್ನು KMF ಚುನಾವಣೆ ನಡೆದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡ ಬಾಲಚಂದ್ರ ಜಾರಕಿಹೊಳಿ ಇಬ್ಬರು ಒಂದಾಗಿದ್ದಾರೆ. ಕಾಂಗ್ರೆಸ್ ಸ್ಥಾನ ಮಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಕಾಕ್ ನಲ್ಲಿ ನಮ್ಮ ಶಕ್ತಿಯನ್ನು ನಾವು ತೋರಿಸಲೇಬೇಕು ಎಂದರು. 

ಇನ್ನು ರಮೇಶ್ ಜಾರಕಿಹೊಳಿ ಯಮನಕರಡಿ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಸ್ಪರ್ಧೆ ಮಾಡುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು  ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಬಾಕಿ ಇದೆ ಎನ್ನುವ ಮೂಲಕ ಐದು ವರ್ಷದ ಅವಧಿಯನ್ನು  ರಾಜ್ಯ ಸರ್ಕಾರ  ಪೂರ್ಣಗೊಳಿಸುವ ಭರವಸೆ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!