
ಅಲಪ್ಪುಳ: ಇಲ್ಲಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಸ್ಯಾಹಾರದ ಖಾದ್ಯವೆಂದು, ದನದ ಮಾಂಸ ತಿನ್ನಿಸಿದ ಬಗ್ಗೆ ಕೆಲವು ಸಸ್ಯಾಹಾರಿ ವಿದ್ಯಾರ್ಥಿಗಳ ಗುಂಪು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ.
ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪುಳಿಂಕುನ್ನುನಲ್ಲಿರುವ ಕಾಲೇಜಿನಲ್ಲಿ ಗುರುವಾರ ನಡೆದಿದ್ದ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ ಬಿಹಾರದ ಕೆಲವು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ.
ಸಸ್ಯಾಹಾರಿ ಖಾದ್ಯವೆಂದು ಬೀಫ್ ಕಟ್ಲೇಟ್ ನೀಡಲಾಗಿತ್ತು. ಇದು ಸಸ್ಯಾಹಾರವೇ? ಎಂದು ವಿದ್ಯಾರ್ಥಿಗಳು ಪದೇಪದೇ ಕೇಳಿದಾಗಲೂ ಸಿಬ್ಬಂದಿ, ಸಸ್ಯಾಹಾರಿ ಕಟ್ಲೇಟ್ ಎಂದಿದ್ದರು ಎಂದು ಆಪಾದಿಸಲಾಗಿದೆ.
ಪ್ರಾಂಶುಪಾಲರಿಗೆ ಅರಿವಿದ್ದೇ ಇದು ನಡೆದಿದೆ. ತಮ್ಮ ನಂಬಿಕೆ, ಧರ್ಮಕ್ಕೆ ಸಂಬಂಧಿಸಿದುದರಿಂದ, ಬೀಫ್ ತಿಂದ ಬಳಿಕ ತಮಗೆ ತೀವ್ರ ಖಿನ್ನತೆಯ ಭಾವ ಮೂಡಿತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.