
ಪಾವಗಡ (ಜ.31): ನಾಲ್ಕು ವರ್ಷದ ಕರಡಿಯೊಂದು ಪಾಳು ಬಾವಿಗೆ ಬಿದ್ದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು ಅರಿವಳಿಕೆ ಮದ್ದಿನ ಕೊರತೆಯಿಂದಾಗಿ ಮೇಲೆತ್ತುವ ಕಾರ್ಯ ವಿಳಂಬವಾಗಿದೆ.
ರಾತ್ರಿ 12 ರ ಸುಮಾರಿನಲ್ಲಿ ಆಹಾರ ಅರಸಿ ಬಂದ ಕರಡಿ ಗ್ರಾಮದ ಈರಣ್ಣ ಎಂಬವರ ತೋಟದ ಪಾಳು ಬಾವಿಗೆ ಬಿದ್ದಿದೆ. ಮೇಲೆ ಬರಲು ಯತ್ನಿಸಿದೆಯಾದರೂ ಸಫಲವಾಗಿಲ್ಲ. ಅರಿವಳಿಕೆ ಮದ್ದಿನ ಕೊರತೆಯಿಂದ ಕಾರ್ಯಾಚರಣೆಗೆ ವಿಳಂಬವಾಗಿದ್ದು, ಬೆಂಗಳೂರಿನ ಬನ್ನೇರುಘಟ್ಟದ ವಲಯಾರಣ್ಯಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿಲಾಗಿದೆ. ಚುಚ್ಚುಮದ್ದು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.