ಶಾಸಕ ಮುನಿರತ್ನ ಬೆಂಬಲಿಗರ ದೌರ್ಜನ್ಯ: ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಕಾರ್ಪೋರೇಟರ್ಸ್

Published : May 29, 2017, 03:24 PM ISTUpdated : Apr 11, 2018, 12:39 PM IST
ಶಾಸಕ ಮುನಿರತ್ನ ಬೆಂಬಲಿಗರ ದೌರ್ಜನ್ಯ: ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಕಾರ್ಪೋರೇಟರ್ಸ್

ಸಾರಾಂಶ

ಕಪ್ಪುಪಟ್ಟಿ ಸೀರೆ ಧರಿಸಿ ಕೌನ್ಸಿಲರ್ ಸಭೆಗೆ ಹಾಜರಾದ ಮಂಜುಳಾ ನಾರಾಯಣಸ್ವಾಮಿ ಪರ ಕಾಂಗ್ರೆಸ್ ಸದಸ್ಯೆ ಆಶಾ, ಬಿಜೆಪಿ ಸದಸ್ಯೆ ಮಮತಾ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮೊದಲು ಪಾಲಿಕೆ ಸದಸ್ಯರು ಹಾಗೂ ಮೇಯರ್​ಗಳ ಮಧ್ಯೆ ಮಾತಿನ ಚಕಮಕಿ ನಡೀತು.

ಬೆಂಗಳೂರು(ಮೇ.29): ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇಂದು ಹೈಡ್ರಾಮಾ ನಡೆದಿದೆ. ಶಾಸಕ ಮುನಿರತ್ನ ಬೆಂಬಲಿಗರ ದೌರ್ಜನ್ಯ ಖಂಡಿಸಿ ಮಹಿಳಾ ಕಾರ್ಪೊರೇಟರ್​ಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಿಬಿಎಂಪಿ ಸದಸ್ಯರಾದ ಆಶಾ, ಮಮತಾ ಹಾಗೂ ಮಂಜುಳಾ ಫಿನಾಯಿಲ್​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌನ್ಸಿಲ್​ ಸಭೆ ಆರಂಭ ಆಗುತ್ತಿದ್ದಂತೆ ಮುನಿರತ್ನ ಬೆಂಬಲಿಗರ ದೌರ್ಜನ್ಯ ವಿಷಯ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮೂವರು ಮಹಿಳಾ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿ ಮುನಿರತ್ನ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದರು.

ಕಪ್ಪುಪಟ್ಟಿ ಸೀರೆ ಧರಿಸಿ ಕೌನ್ಸಿಲರ್ ಸಭೆಗೆ ಹಾಜರಾದ ಮಂಜುಳಾ ನಾರಾಯಣಸ್ವಾಮಿ ಪರ ಕಾಂಗ್ರೆಸ್ ಸದಸ್ಯೆ ಆಶಾ, ಬಿಜೆಪಿ ಸದಸ್ಯೆ ಮಮತಾ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮೊದಲು ಪಾಲಿಕೆ ಸದಸ್ಯರು ಹಾಗೂ ಮೇಯರ್​ಗಳ ಮಧ್ಯೆ ಮಾತಿನ ಚಕಮಕಿ ನಡೀತು. ಇದೇ ವೇಳೆ ಜೆಡಿಎಸ್ ಶಾಸಕ ಗೋಪಾಲಯ್ಯ, ಅಧಿಕಾರ ಇದೆ ಅಂತ ಎಷ್ಟು ಬೇಕಾದ್ರೂ ಪ್ರಕರಣ ಹಾಕಬಹುದಾ? ನಮ್ಮ ಸದಸ್ಯರ ಮೇಲೆ ದೌರ್ಜನ್ಯ ಎಸಗೋದು ನಿಮ್ಮ ಸಂಸ್ಕೃತೀನಾ ಅಂತ ಪ್ರಶ್ನೆ ಮಾಡಿದರು. ಈ ಮಾತಿಗೆ ಗರಂ ಆದ ಮೇಯರ್ ಪದ್ಮಾವತಿ, ಗೌರವದಿಂದ ಮಾತನಾಡಿ, ನಿಮ್ಮ ಮಾತು ವಾಪಸ್ ಪಡೆಯಿರಿ ಅಂತ ಖಾರವಾಗಿ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?
ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್: ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ