ಬೆಂಗಳೂರು (ಸೆ.17): ರಾಜಕಾಲುವೆ ಒತ್ತುವರಿ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಒತ್ತುವರಿ ತೆರವು ಕಾರ್ಯ ಮುಂದುವರೆಸಿದೆ.
ಇವತ್ತು ಮಾಜಿ ಕಾರ್ಪೋರೇಟರ್ ನಾರಾಯಣ್ ಅವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಿದೆ.
ಹೊಸಕೆರೆಹಳ್ಳಿ ಕೆರೆಯ ಸರ್ವೆ ನಂಬರ್ 15ರಲ್ಲಿರುವ ಒಂದುಕಾಲು ಎಕರೆ ತೆರವುಗೊಳಿಸಲಾಗಿದೆ.
8 ಜೆಸಿಬಿಗಳು ತೆರವುಕಾರ್ಯಗೊಳಿಸಿದ್ದು, ಸ್ಥಳದಲ್ಲಿ 80 ಮಂದಿ ಪೊಲೀಸ್ ಸಿಬ್ಬಂದಿ ಇದ್ದರು.