
ಬೆಂಗಳೂರು(ಅ.6): ಪಟಾಕಿ ಹೊಡೆಯುವವರಿಗೆ ಈ ಬಾರಿ ಬಿಬಿಎಂಪಿ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಪಾಲಿಕೆ ವ್ಯಾಪ್ತಿಯ ಮನೆಗಳ ಎದುರು ಪಟಾಕಿಗಳನ್ನು ನೀವು ಹೊಡೆಯುವಂತಿಲ್ಲ. ಬಿಬಿಎಂಪಿ ನಿಗದಿತ ಸ್ಥಳಗಳಲ್ಲಿ ಮಾತ್ರ ಪಟಾಕಿ ಸಿಡಿಸುವಂತೆ ಸುತ್ತೋಲೆ ಹೊರಡಿಸುತ್ತಿದೆ. ಇದು ದಕ್ಷಿಣ ಮತ್ತು ಉತ್ತರ ಪಾಲಿಕೆ ವಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.
ಇನ್ನಿತರ ಷರತ್ತುಗಳು
ಮನೆ,ಅರ್ಪಾಟ್ಮೆಂಟ್ ಮುಂದೆ ಪಟಾಕಿ ಸಿಡಿಸುವಂತಿಲ್ಲ. ಹೆಚ್ಚು ಶಬ್ದ ಮಾಡೊ ಪಟಾಕಿ ಸಿಡಿಸುವಂತಿಲ್ಲ. ಕಳೆದ ವರ್ಷ ಯಲಹಂಕ ವಲಯದಲ್ಲಿ ಪ್ರಾಯೋಗಿಕವಾಗಿ ಮಾಡಿ ಯಶಸ್ವಿಯಾಗಿತು. ಈ ಬಾರಿ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಬಿಬಿಎಂಪಿ, ಸಂಚಾರಿ ಪೋಲೀಸರು ಹಾಗೂ ಸ್ವಯಂ ಸೇವೆ ಸಂಘದವರು ಮನೆ ಮುಂದೆ ಪಟಾಕಿ ಸಿಡಿಸದಂತೆ ನಿಮ್ಮ ಮನ ಒಲಿಸಲಿದ್ದಾರೆ. ದಂಡದ ಬಗ್ಗೆ ಕೂಡ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದ್ದಾರೆ.
ನಿಗದಿತ ಸ್ಥಳಗಳ ಪ್ರದೇಶಗಳು
ಬಿಟಿಎಂ ಲೇಔಟ್,ಪದ್ಮನಾಭನಗರ,ವಿಜಯನಗರ,ಚಿಕ್ಕಪೇಟೆ,ಜಯನಗರ,ಬಸವನಗುಡಿ,ಗಾಳಿ ಆಂಜನೇಯ ದೇವಸ್ಥಾನ, ಜೆಪಿನಗರ
ವಾಯು ಮಾಲಿನ್ಯ , ಶಬ್ದ ಮಾಲಿನ್ಯ ನಿಯಂತ್ರಣ
ಧೂಳು ,ಹೊಗೆ ಇಲ್ಲದೇ ಜನರ ಆರೋಗ್ಯ ರಕ್ಷಣೆ
ಕಣ್ಣುಗಳಿಗೆ ಕಿಡಿ ತಗುಲಿ ಹಾನಿ ಪ್ರಮಾಣ ಇಳಿಕೆ
ಪಟಾಕಿ ತ್ಯಾಜ್ಯ ಪ್ರಮಾಣದಲ್ಲೂ ಇಳಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.