ತನ್ನ ಪರ ವಕಾಲತ್ತು ವಹಿಸಿದ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಬಸವರಾಜೇಂದ್ರ

Published : Aug 22, 2017, 08:37 AM ISTUpdated : Apr 11, 2018, 12:40 PM IST
ತನ್ನ ಪರ ವಕಾಲತ್ತು ವಹಿಸಿದ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಬಸವರಾಜೇಂದ್ರ

ಸಾರಾಂಶ

ರಾಜ್ಯ ಸರ್ಕಾರ ಬಿಜೆಪಿ ವಿರುದ್ಧ ಎಸಿಬಿ ಅಸ್ತ್ರ ಪ್ರಯೋಗಿಸಿದೆ.ಹಳೇ ಕೇಸ್ಗಳಿಗೆ ಮರು ಜೀವ ಕೊಡುತ್ತಿದೆ. ಆದರೆ, ರಾಜ್ಯ ಸರ್ಕಾರ ರೀ ಓಪನ್ ಮಾಡಿದ ಡಿನೋಟಿಫಿಕೇಷನ್ ಪ್ರಕರಣವೊಂದರಲ್ಲಿ ಕೆಎಎಸ್ ಅಧಿಕಾರಿಯೊಬ್ಬರು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಆಶ್ಚರ್ಯ ಏನ್ ಗೊತ್ತಾ.. ಇದೇ ಅಧಿಕಾರಿಗೆ ರಾಜ್ಯ ಸರ್ಕಾರ ಪ್ರಮೋಷನ್ಗೆ ಶಿಫಾರಸ್ಸು ಮಾಡಿತ್ತು. ಈ ವಿಚಿತ್ರ ರಹಸ್ಯದ EXCLUSIVE ರಿಪೋರ್ಟ್ ಇಲ್ಲಿದೆ ನೋಡಿ.  

ಬೆಂಗಳೂರು(ಆ.22): ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಎಸಿಬಿ ಹಾಗೂ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.. ಆಶ್ಚರ್ಯ ಏನ್ ಗೊತ್ತಾ ಇದೇ ಅಧಿಕಾರಿ ಪರ ವಕಾಲತ್ತು ವಹಿಸಿತ್ತು. ಇದೇ ಸಿದ್ದರಾಮಯ್ಯ ಸರ್ಕಾರ. 1998ನೇ ಸಾಲಿನಲ್ಲಿ ಅಸಿಸ್ಟಂಟ್ ಕಮಿಷನರ್ ಹುದ್ದೆಗೆ ನೇಮಕವಾಗಿದ್ದ ಬಸವರಾಜೇಂದ್ರ ಅವ್ರು, ಈ  ಬ್ಯಾಚ್ನಲ್ಲಿ ಅಕ್ರಮ ಫಲಾನುಭವಿಯಾಗಿದ್ದರು ಎಂದು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ ಸತ್ಯಶೋಧನಾ ಸಮಿತಿ ವರದಿ ನೀಡಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಬಸವರಾಜೇಂದ್ರ ಅವರಿಗೆ ಎ.ಸಿ.ಹುದ್ದೆಯಿಂದ ಕೆಳಗಿಳಿಸಿ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಅಸಿಸ್ಟಂಟ್ ಕಂಟ್ರೋಲರ್ ಹುದ್ದೆ ನೀಡಿತ್ತು. ಕೆಪಿಎಸ್ಸಿ ಸಲ್ಲಿಸಿದ್ದ ಪರಿಷ್ಕೃತ ಪಟ್ಟಿಯನ್ನು ಹೈಕೋರ್ಟ್ ಒಪ್ಪಿಕೊಂಡಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದಲ್ಲೇ ಬರೋ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಮಾತ್ರ ಬಸವರಾಜೇಂದ್ರ ಅವರ ಹುದ್ದೆಯನ್ನು ಬದಲಿಸಲಿಲ್ಲ.

ಹುದ್ದೆ ಬದಲಿಸೋ ಬದಲು ಪ್ರಮೋಷನ್ಗೆ ಶಿಫಾರಸು

ಹುದ್ದೆ ಬದಲಿಸಲಿಲ್ಲ ಸರಿ, ಅಲ್ಲಿಗೆ ಬಿಡಲಿಲ್ಲ. ಸರ್ಕಾರ ಐಎಎಸ್ ಹುದ್ದೆಗೆ ಪ್ರಮೋಷನ್ ಕೊಡಲು ಯುಪಿಎಸ್'ಸಿಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಶಿಫಾರಸು ಮಾಡಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಅಕ್ರಮವಾಗಿ 51 ಅಂಕ ಪಡೆದಿದ್ದ ಬಸವರಾಜೇಂದ್ರ

1998ನೇ ಸಾಲಿನ ನೇಮಕಾತಿಯಲ್ಲಿ ನಡೆದಿದ್ದ ವಿವಿಧ ಅಕ್ರಮಗಳ ಕುರಿತು ತನಿಖೆ ನಡೆಸಿದ್ದ ಸಿಐಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವರದಿಯನ್ನು ಸಲ್ಲಿಸಿತ್ತು. ಅಲ್ಲದೆ, ಹೈಕೋರ್ಟ್ ರಚಿಸಿದ್ದ ಸತ್ಯಶೋಧನಾ ಸಮಿತಿ ಕೂಡ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಆರಂಭದ ವರ್ಷದಲ್ಲೇ ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು.  ಬಸವರಾಜೇಂದ್ರ ಅವರು ಅಕ್ರಮವಾಗಿ 51 ಅಂಕಗಳನ್ನು ಪಡೆದಿದ್ದರು ಎಂದು ಸಿಐಡಿ ಮತ್ತು ಸತ್ಯಶೋಧನಾ ಸಮಿತಿ ವರದಿಯಲ್ಲಿ ವಿವರವಾಗಿ ಹೇಳಿತ್ತು. ಯಡಿಯೂರಪ್ಪ ಅವರ ನಂತ್ರ ಮುಖ್ಯಮಂತ್ರಿ ಆಗಿದ್ದ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವಧಿಯಲ್ಲಿ  ಒಂದೇ ಒಂದು ಕ್ರಮ ವಹಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ವರದಿ ಆಧರಿಸಿ ಕ್ರಮ ವಹಿಸಲಿಲ್ಲ. ಆದರೀಗ ಇದೇ ಅಧಿಕಾರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ