ಕುಡಿದ ಮತ್ತಿನಲ್ಲಿ ಬಾರ್ ಮಾಲಿಕನ ಮಗನ ಮೇಲೆ ಪುಂಡರ ಹಲ್ಲೆ

First Published Jun 21, 2018, 1:40 PM IST
Highlights

ಬಾರ್ ನಲ್ಲಿ ಕುಡಿದು ಮಟಮಟ ಮಧ್ಯಾಹ್ನ ಕುಡಿದ ಮತ್ತಿನಲ್ಲಿ  ಪುಂಡರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಸಂದ್ಯಾಶ್ರೀ ಬಾರ್ ನಲ್ಲಿ ಈ ಘಟನೆ ನಡೆದಿದೆ.  ನಾಲ್ಕು ಜನ ಯವಕರು ಬಾರ್ ಮಾಲೀಕನ ಮಗನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.  

ನೆಲಮಂಗಲ (ಜೂ. 21):  ಬಾರ್ ನಲ್ಲಿ ಕುಡಿದು ಮಟಮಟ ಮಧ್ಯಾಹ್ನ ಕುಡಿದ ಮತ್ತಿನಲ್ಲಿ  ಪುಂಡರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯ ಸಂದ್ಯಾಶ್ರೀ ಬಾರ್ ನಲ್ಲಿ ಈ ಘಟನೆ ನಡೆದಿದೆ. 

ನಾಲ್ಕು ಜನ ಯವಕರು ಬಾರ್ ಮಾಲೀಕನ ಮಗನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.   ಮಧ್ಯದ ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿರುವ ದೃಶ್ಯ ಬಾರ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಡಾಬಸ್‌ಪೇಟೆಯ ಜಯರಾಮ್ ಎನ್ನುವವರಿಗೆ ಈ ಬಾರ್ ಸೇರಿದೆ.  ದಾಂದಲೆ ಮಾಡಿದ ಯುವಕರಿಗೆ ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆಯಿದೆ ಎನ್ನಲಾಗಿದ್ದು  ಈ ಕಾರಣಕ್ಕೆ  ರಾಜಕೀಯ ಮುಖಂಡರ ನೇತೃತ್ವದಲ್ಲಿ ಪೊಲೀಸರು ರಾಜಿ-ಸಂಧಾನ ಮಾಡಿದ್ದಾರೆ. 

ಹಲ್ಲೆ ನಡೆಸಿದ್ದರೂ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ಪುಂಡರ ಪರ ನಿಂತಿದ್ದಾರೆ ಎಂದು ಬಾರ್ ಮಾಲಿಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 


 

click me!