
ಮುಂಬೈ: ದೊಡ್ಡ ಮೊತ್ತದ ನೋಟುಗಳ ಚಲಾವಣೆ ರದ್ದು ಮಾಡಬೇಕೆಂದು ಸಲಹೆ ನೀಡಿದ್ದ ಚಿಂತಕರ ಚಾವಡಿಗೆ ಕೇಂದ್ರ ಸರ್ಕಾರದ ಕ್ರಮ ರುಚಿಸಿಲ್ಲ. ಅರ್ಥಕ್ರಾಂತಿ ಪ್ರತಿಷ್ಠಾನದ ಮೂಲಕ ಸುಲಭ, ಸರಳ ಮತ್ತು ಸುಲಲಿತ ಆರ್ಥಿಕ ವಹಿವಾಟು ತಂತ್ರವನ್ನು ಪ್ರತಿಪಾದಿಸುತ್ತಿರುವ ಚಿಂತಕರ ಚಾವಡಿ. ಅನಿಲ್ ಬೋಕಿಲ್ ಚಾವಡಿಯ ಪ್ರಮುಖ. ಮೊದಲು ಪ್ರಧಾನಿ ಮೋದಿ ಅವರಿಗೆ ನೋಟು ಚಲಾವಣೆ ರದ್ದು ಮಾಡುವ ಚಿಂತನೆಯನ್ನು ಬಿತ್ತಿದವರು.
ಈಗ ನೋಟು ಚಲಾವಣೆ ರದ್ದು ಯೋಜನೆ ಜಾರಿಗೆ ಬಂದೇ ಬಿಟ್ಟಿದೆ. ಆದರೆ, ಕೇಂದ್ರ ಸರ್ಕಾರದ ನೋಟು ಚಲಾವಣೆ ರದ್ದು ಯೋಜನೆ ಅನಿಲ್ ಬೋಕಿಲ್ ಅವರಿಗೆ ಸಮಾಧಾನ ತಂದಿಲ್ಲ. ದೊಡ್ಡ ಮೌಲ್ಯದ ನೋಟು ರದ್ದು ಮಾಡಬೇಕೆಂದು ನಾವು ಪ್ರತಿಪಾದಿಸಿದ್ದೇವೆ. ಆದರೆ, ನೋಟು ಬದಲಾಯಿಸಬೇಕು ಎಂದಿರಲಿಲ್ಲ ಎಂದು ಅನಿಲ್ ಬೋಕಿಲ್ ಹೇಳಿದ್ದಾರೆ. ನೋಟು ರದ್ದಾದ ಪ್ರಕಟಣೆ ಹೊರ ಬಿದ್ದ ನಂತರ ಪುಣೆಯಲ್ಲಿರುವ ಅನಿಲ್ ಬೋಕಿಲ್ ಮತ್ತವರ ಸಂಗಡಿಗರು ಸೆಲಬ್ರಿಟಿಗಳಾಗಿದ್ದಾರೆ. ಮುಂಬರುವ ಬಜೆಟ್'ಗೆ ಅರ್ಥಕ್ರಾಂತಿ ಪ್ರತಿಷ್ಠಾನ ಏನೆಲ್ಲ ಆರ್ಥಿಕ ಸಲಹೆ ನೀಡಬಹುದು ಎಂಬ ಕುತೂಹಲ ಅಲ್ಲಿನ ಜನರಲ್ಲಿದೆ. ನಾವು ಪ್ರಸ್ತಾಪಿಸಿದ್ದು ಈ ಮಾದರಿ ನೋಟು ಚಲಾವಣೆ ರದ್ದು ಯೋಜನೆ ಅಲ್ಲ ಎಂದಿದ್ದಾರೆ ಬೋಕಿಲ್. ಹಳೆ ನೋಟು ರದ್ದು ಮಾಡಿ ಮತ್ತಷ್ಟುದೊಡ್ಡ ಮೊತ್ತದ ನೋಟು ಚಲಾವಣೆಗೆ ತರುವುದು ಅರ್ಥಕ್ರಾಂತಿ ಪ್ರತಿಷ್ಠಾನದ ಮಾದರಿ ಅಲ್ಲ. ಆರ್ಥಿಕ ನೀತಿ ನಿಯಮಗಳನ್ನು ಸರಳೀಕರಿಸಿ ದೇಶದ ಸಮಾಜಿಕ ಆರ್ಥಿಕ ಪರಿಸ್ಥಿತಿ ಸಕಾರಾತ್ಮಕವಾಗಿ ಪರಿವರ್ತಿಸಬೇಕು, ಬಂಡವಾಳ ಮತ್ತು ಸಾಲ ಸುಲಭವಾಗಿ ದಕ್ಕಬೇಕು, ನಗದು ರಹಿತ ವ್ಯವಸ್ಥೆ ತಂದು ಕಪ್ಪುಹಣ ಹರಿದು ಬರುವುದನ್ನು ತಡೆಗಟ್ಟಬೇಕು ಎಂಬುದು ಪ್ರತಿಷ್ಠಾನದ ಚಿಂತನೆ ಎಂದು ಎಕನಾಮಿಕ್ ಟೈಮ್ಸ್ಗೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ.
2013ರಲ್ಲಿ ಗುಜರಾತ್ ಮಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ಅವರನ್ನು ಅರ್ಥಕ್ರಾಂತಿ ಪ್ರತಿಷ್ಠಾನದ ಕಾರ್ಯಕರ್ತರು ತೆರಿಗೆ ಸುಧಾರಣೆ ತರಬೇಕು ಮತ್ತು ಎಲ್ಲಾ ತೆರಿಗೆಗಳನ್ನು ರದ್ದು ಮಾಡಿ ಬ್ಯಾಂಕು ವಹಿವಾಟು ತೆರಿಗೆ ಜಾರಿಗೆ ತರುವಂತೆ ಸಲಹೆ ಮಾಡಿದ್ದರು. ಹೆಚ್ಚು ಮೊತ್ತದ ನೋಟುಗಳ ಚಲಾವಣೆ ರದ್ದು ಮಾಡುವುದು ಆರ್ಥಕ್ರಾಂತಿ ಪ್ರತಿಷ್ಠಾನದ ಮೂರನೇ ಆದ್ಯತೆಯ ಪ್ರಸ್ತಾಪವಾಗಿತ್ತು. ಕೇಂದ್ರ ಸರ್ಕಾರ ಈಗ .500 ಮತ್ತು .1000 ನೋಟುಗಳನ್ನು ಬದಲಾಯಿಸಿದೆ. ಶೇ.84ರಷ್ಟಿರುವ ಈ ನೋಟುಗಳನ್ನು ಬದಲಾಯಿಸುವುದಕ್ಕೆ ಸಾಕಷ್ಟುಕಾಲಾವ ಕಾಶ ಬೇಕು. ಏಕಾಏಕಿ ಎಲ್ಲಾ ನೋಟ್ನು ರದ್ದು ಮಾಡಿದರೆ ನಗದು ಹರಿವು ಬರು ವುದೇಗೆ ಎಂಬುದು ಬೋಕಿಲ್ ಪ್ರಶ್ನೆ.
ಅರ್ಥಕ್ರಾಂತಿ ಪ್ರತಿಷ್ಠಾನದ ತತ್ವ:
* ಯಾವುದೇ ರಾಜಕೀಯ ಪಕ್ಷ, ಧಾರ್ಮಿಕ ಪಂಥಕ್ಕೆ ಬಾಗುವುದಿಲ್ಲ. ಹಣಕಾಸು ಮತ್ತು ಆರ್ಥಿಕತೆಯೊಂದಿಗೆ ಮಾತ್ರ ಸಂಬಂಧ.
* ನಮ್ಮ ಪ್ರಸ್ತಾಪಗಳನ್ನು ಸ್ವೀಕರಿಸುವ ಆರ್ಎಸ್ಎಸ್, ಕಾಂಗ್ರೆಸ್ ಅಥವಾ ಒವೈಸಿಯಾದರೂ ನಾವು ಬೆಂಬಲಿಸುತ್ತೇವೆ.
* ಮೋದಿ ಉತ್ತಮ ನಾಯಕ ಇರಬಹುದು, ಆದರೆ, ನೋಟು ರದ್ದು ನಮ್ಮ ಪ್ರಸ್ತಾಪದಂತಿಲ್ಲ.
* ನಾವು ನೋಟು ಚಲಾವಣೆ ರದ್ದಿಗೆ ಬೆಂಬಲಿಸುವುದಿಲ್ಲ, ದೊಡ್ಡ ಮೊತ್ತ ನೋಟು ಹಿಂಪಡೆಯಬೇಕಷ್ಟೇ.
* ಅಬ್ಕಾರಿ ಮತ್ತು ಆಮದು ಸುಂಕ ಹೊರತುಪಡಿಸಿ ಎಲ್ಲಾ ತೆರಿಗೆ ರದ್ದು ಮಾಡಬೇಕು.
* ಪ್ರತ್ಯಕ್ಷ, ಪರೋಕ್ಷ ತೆರಿಗೆ ರದ್ದುಮಾಡಿ, ಬ್ಯಾಂಕು ವಹಿವಾಟು ತೆರಿಗೆ ತರಬೇಕು
* ಶೇ.3-4ರಷ್ಟುಬಡ್ಡಿದರದಲ್ಲಿ ಸಾಲ ನೀಡಬೇಕು
* 2000 ರೂ. ಮೇಲ್ಪಟ್ಟ ವ್ಯವಹಾರ ಚೆಕ್ ರೂಪದಲ್ಲಿರಬೇಕು
(ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.